ಮೂಡಿಗೆರೆಯಿಂದ ಮತ್ತಿಕಟ್ಟೆ ಗೆ ಶಾಲಾ ಮಕ್ಕಳಿಗಾಗಿಯೇ ಹಲವು ವರ್ಷಗಳಿಂದ ಸರ್ಕಾರ ಬಸ್ ಸೇವೆ ಆರಂಭಿಸಿದೆ. ಬಸ್ ಸೇವೆಯನ್ನು ನಂಬಿಕೊಂಡು ಬಾಳೂರು ಮತ್ತಿಕಟ್ಟೆ ಹೆಗ್ಗುಡ್ಲು ಬಣಕಲ್ ಪಲ್ಗುಣಿ ಭಾಗದ ಹಳ್ಳಿಗಾಡಿನ ಶಾಲಾ ಕಾಲೇಜು ಮಕ್ಕಳು ಮತ್ತಿಕಟ್ಟೆ ಬಸ್ಸು ಅನ್ನೆ ಅವಲಂಬಿಸಿದ್ದಾರೆ. ಪ್ರತಿ ನಿತ್ಯ ಖಾಸಗಿ ವಾಹನದಲ್ಲಿ ತೆರಳಲು ಕಷ್ಟ . ಖಾಸಗಿ ವಾಹನಗಳಿಗೆ ಪ್ರತಿದಿನ ಬಾಳೂರಿನಿಂದ ಮೂಡಿಗೆರೆಗೆ ತೆರಳಲು ಸಾಧ್ಯವಿಲ್ಲ.ಮೊದಲೇ ಸರಿಯಾದ ಸಮಯಕ್ಕೆ ಬಸ್ ಬಾರದೆ ಮಕ್ಕಳು ಹೊತ್ತಲ್ಲದ ಹೊತ್ತಿಗೆ ಶಾಲಾ ಕಾಲೇಜುಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಮದ್ಯೆ ಇಂದು ಮತ್ತಿಕಟ್ಟೆ ಯಿಂದ ಮೂಡಿಗೆರೆಗೆ ಹೋಗುವ ಮಾರ್ಗ ಮದ್ಯದಲ್ಲಿ ಬಸ್ ಕೆಟ್ಟು ನಿಂತಿದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಹಳೆಯ ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಶಾಲಾ ಮಕ್ಕಳು ಪರದಾಡುವಂತಾಗಿದೆ.
ರಾಜ್ಯ ಸರಕಾರ ಪ್ರತಿ ಗ್ರಾಮಗಳಿಗೆ ಬಸ್ಗಳ ಸೌಕರ್ಯ ಕಲ್ಪಿಸಬೇಕು ಮತ್ತು ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ-ಕಾಲೇಜುಗಳಿಗೆ ತೆರಳಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಾರಿಗೆ ಸಂಚಾರಕ್ಕಾಗಿ ಲಕ್ಷಾಂತರ ರೂ.ಖರ್ಚು ಮಾಡುತ್ತಿದೆ.
ಬಸ್ ಘಟಕಗಳಲ್ಲಿ ನಿಲ್ಲಿಸಲಾದ ಹಳೆಯ ಬಸ್ಗಳನ್ನು ಹಳ್ಳಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಬಸ್ಗಳು ಎಲ್ಲೆಂದರಲ್ಲಿ ಕಟ್ಟು ಹೋಗುತ್ತಿದ್ದು, ಗಂಟೆಗಟ್ಟಲೆ ಕಾದು ಖಾಸಗಿ ವಾಹನದಲ್ಲಿ ತೆರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಬಹುತೇಕ ಬಸ್ಗಳು ಹಳೆಯದ್ದಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ.ಆದರೂ ಗ್ರಾಮೀಣ ಪ್ರದೇಶಗಳಿಗೆ ಡಕೋಟಾ ಬಸ್ಗಳನ್ನು ಓಡಿಸಲಾಗುತ್ತಿದೆ. ಆದ್ದರಿಂದ ಕೂಡಲೇ ಹೊಸ ಬಸ್ಗಳನ್ನು ಹಳ್ಳಿಗಳಿಗೆ ಓಡಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ
