ಮೂಡಿಗೆರೆ :ಚಾಲನೆ ಗ್ರಾಮ ಒನ್ ಯೋಜನೆ ಜಾರಿಯಿಂದ ಜನ ದೂರದ ಕಛೇರಿ ಹಾಗೂ ನಗರಗಳಿಗೆ ಸುತ್ತುವುದು ತಪ್ಪುತ್ತದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು
ಜಾವಳಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಬಹು ಮಹಾತ್ವಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯಲ್ಲಿ100 ಸೇವೆಗಳಿದ್ದು ದೂರದ ನಗರಕ್ಕೆ ಹೋಗದೆ ನಿಮ್ಮ ಗ್ರಾಮದಲ್ಲಿ ಪಡೆಯಬಹುದು ಈ ಯೋಜನೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭವಾಗಲಿದೆ ಎಂದರು
ಜಾವಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಪಿ.ಪ್ರದೀಪ್, ಬಿಜೆಪಿ ಮುಖಂಡ ಪರೀಕ್ಷಿತ್ ಜಾವಳಿ, ನಾರಾಯಣ್ ಆಚಾರ್ಯ, ಸತೀಶ್ ಮಲೆಮನೆ, ನಿವೃತ್ತ ಶಿಕ್ಷಕ ಚಂದ್ರಯ್ಯ,ಚಂದ್ರಶೇಖರ್, ಸುನಿಲ್, ಸಂದೀಪ್ ಪುರದಮಕ್ಕಿ, ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ಅರುಣ್, ರಂಜಿತ್, ಚಿದಂಬರ,ವಸಂತ್ ಜಾವಳಿ,ರಮೇಶ್,ವಿಶ್ವಾಸ್, ಕೇಶವಮೂರ್ತಿ ಇದ್ದರು
