ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್ ರ ಕಾರ್ಯ ವೈಖರಿಗೆ ಸಾರ್ವಜನಿಕರ ಮೆಚ್ಚುಗೆ


ಬಣಕಲ್ :ಇಂದಿನ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆ ಪ್ರತಿನಿಧಿಗಳು ಎಂದರೆ ಜನ ಅವರನ್ನು ಅಸಡ್ಡೆಯಿಂದ ಕಾಣುವುದೇ ಹೆಚ್ಚು ಚುನಾವಣೆ ಬಂದಾಗ ಆಶ್ವಾಸನೆ ಕೊಡುವ ರಾಜಕಾರಣಿಗಳು ನಂತರದ ದಿನಗಳಲ್ಲಿ ಕೊಟ್ಟ ಮಾತು ಮರೆತೇ ಬಿಟ್ಟಿರುತ್ತಾರೆ ಮತ್ತೆ ಚುನಾವಣೆ ಬರುವ ಸಮಯದಲ್ಲಿ ಇನ್ನೊಂದು ಆಶ್ವಾಸನೆ ಕೊಡುವುದು ಹೀಗೆ ರಾಜಕೀಯ ವ್ಯಕ್ತಿಗಳು ಎಂದರೆ ಜನರು ಅಸಹ್ಯ ದಿಂದ ಕಾಣುವಂತಾಗಿದೆ ಕೆಲವು ಚುನಾಹಿತ ಪ್ರತಿನಿದಿಗಳ ಕೆಟ್ಟ ನಡವಳಿಕೆಯಿಂದ ಎಲ್ಲಾ ರಾಜಕೀಯ ಪಕ್ಷಗಳ ಚುನಾಹಿತ ಪ್ರತಿನಿದಿಗಳನ್ನು ಅದೇ ದೃಷ್ಟಿಯಿಂದ ನೋಡುವಂತಾಗಿದೆ ರಾಜಕೀಯ ಎಂದರೇನೇ ಜನ ಮುಖ ಸಿಂಡರಿಸಿಕೊಳ್ಳುತ್ತಿದ್ದಾರೆ ಈ ರೀತಿಯ ವ್ಯವಸ್ಥೆಯ ನಡುವೆ ಭಿನ್ನ ರೀತಿಯಲ್ಲಿ ಕಾಣುತ್ತಿದ್ದಾರೆ ಬಣಕಲ್ ಗ್ರಾಮ ಪಂಚಾಯಿತಿ ನೂತನ ಸದಸ್ಯ ಸಿರಾಜ್ ಬಣಕಲ್.ಪಟ್ಟಣದ್ಯಾದಂತ ಚಿರಪರಿಚಿತ ವ್ಯಕ್ತಿ ಒಂದು ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ನೂತನವಾಗಿ ಸ್ಪರ್ದಿಸಿದ್ದ ಸಿರಾಜ್ ರವರು ಅಭೂತ ಪೂರ್ವ ಗೆಲುವು ಸಾಧಿಸಿದ್ದರು ಗೆಲುವಿನ ನಂತರ ಸುಮ್ಮನೇ ಕುಳಿತುಕೊಳ್ಳದೆ ತಾನು ಗೆದ್ದ ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಕೆಲಸ ಪ್ರಾರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಚುನಾವಣೆ ಯಲ್ಲಿ ಗೆದ್ದವರಿಗೆ ಮತದಾರರು ನೆನಪಾಗುವುದು ಮತ್ತೆ ಚುನಾವಣೆ ಬಂದಾಗಲೇ ಎಂಬ ಮಾತಿದೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ಸಿರಾಜ್ ರವರು ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜನ ಸಾಮಾನ್ಯರು ತಿರುಗಾಡಲು ಯೋಗ್ಯವಲ್ಲದ ಕೂಡಹಳ್ಳಿಯ ಇಂದಿರಾನಗರದ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚುವ ಮುಖಾಂತರ ತಾತ್ಕಾಲಿಕ ಮುಕ್ತಿ ನೀಡಿದ್ದಾರೆ ಸ್ನೇಹಿತರೊಂದಿಗೆ ತಾನು ಸಹ ರಸ್ತೆಗೆ ಇಳಿದು ಗುಂಡಿ ಮುಚ್ಚು ಕೆಲಸ ಮಾಡಿದ್ದಾರೆ ಶಾಲಾ ಕಾಲೇಜಿಗೆ ಹೋಗಲು ವಾಹನಗಳು ತಿರುಗಾಡಲು ಅಸಾಧ್ಯ ವಾಗಿದ್ದ ದೊಡ್ಡ ದೊಡ್ಡ ಗುಂಡಿ ಬಿದ್ದ ರಸ್ತೆಗೆ ಅಲ್ಪಾ ಮುಕ್ತಿ ದೊರಕಿಸಿದ್ದಾರೆ ನೂತನ ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್ ರ ಈ ಕಾರ್ಯಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ ಜನಪ್ರತಿನಿದಿಯಾದರೂ ಸಹ ಸ್ನೇಹಿತರೊಂದಿಗೆ ತಾನು ಸಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರ ವಹಿಸಿಕೊಂಡ ನಂತರ ರಸ್ತೆಗೆ ಶಾಶ್ವತ ಮುಕ್ತಿ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.ಕೂಡಹಳ್ಳಿ . ಜನರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಆಯ್ಕೆ ಮಾಡಿರುತ್ತಾರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಅಧಿಕಾರ ವಹಿಸಿಕೊಂಡ ನಂತರ ಇನ್ನೂ ಹೆಚ್ಚು ಜನಪರ ಕೆಲಸ ಮಾಡಲು ಅವರಿಗೆ ದೇವರು ಹೆಚ್ಚಿನ ಶಕ್ತಿ ಒದಗಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.