ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜೆಸಿಐ ಬಣಕಲ್ ವಿಸ್ಮಯ ಪದಗ್ರಹಣ ಅಧ್ಯಕ್ಷರಾಗಿ ಶರತ್ ಫಲ್ಗುಣಿ ಆಯ್ಕೆ

ಬಣಕಲ್ :ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಮಾದರಿಯಾಗಿದೆ ಎಂದು ವಿಧಾನಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ಹೇಳಿದರು ಮಂಗಳವಾರ ಸಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೆಸಿಐ ಬಣಕಲ್ ವಿಸ್ಮಯ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ವ್ಯಕ್ತಿತ್ವ ವಿಕಸ ದೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಜೆಸಿಐ ಹೊಂದಿದೆ ವಿಕಸನದ ಜೊತೆ ಸಂಘ ಸಂಸ್ಥೆಗಳು ಕೊರೋನ ಸೋಂಕು ಹರಡದಂತೆ ಜನಜಾಗೃತಿ ಮೂಡಿಸುವ ಅಗತ್ಯವಿದ್ದು ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸಿ ರೋಗ ನಿಯಂತ್ರಿಸಲು ಸಂಘ ಸಂಸ್ಥೆಗಳ ಸಹಕಾರ ಅವಶ್ಯಕ ಎಂದರು.

ಮುಖ್ಯ ಅತಿಥಿಯಾಗಿ ಜೆಸಿಐ ರಾಷ್ಟೀಯ ತರಬೇತುದಾರ ಡಾ ರಾಘವೇಂದ್ರ ಹೊಳ್ಳ ಮಾತನಾಡಿ ಸಮಾಜಸೇವೆ ಯೊಂದಿಗೆ ವ್ಯಕ್ತಿತ್ವ ವಿಕಸನ ನಾಯಕತ್ವ ಬೆಳೆಸಿಕೊಳ್ಳಲು ಸಂಘಟನೆಗಳು ಪೂರಕ ವಾತಾವರಣ ಕಲ್ಪಿಸುತ್ತದೆ. ಅವಕಾಶದ ಸದ್ಬಳಕೆ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು. ವಲಯ ಅಧ್ಯಕ್ಷ ಕುನಾಲ್ ಮಾನಕ್ ಚಂದ್, ವಲಯ ಉಪಾಧ್ಯಕ್ಷ ಸಂತೋಷ್ ಮಾತನಾಡಿದರು ಕಾರ್ಯಕ್ರಮದಲ್ಲಿ ಮಡಿಕೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕುಸಿತದ ನೆರೆಯ ಉತ್ತಮ ವರದಿಗಾಗಿ ಟಿವಿ 9 ಮಾಧ್ಯಮ ವರದಿಗಾರ ಪ್ರಶಾಂತ್ ಮೂಡಿಗೆರೆ ಅವರನ್ನುಜೆಸಿಐ ವತಿಯಿಂದ ವಿಧಾನಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ಸನ್ಮಾನಿಸಿದರು ನೂತನ ಅಧ್ಯಕ್ಷ ಡಿ. ಎಲ್. ಶರತ್ ಪಲ್ಗುಣಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಡಿ.ಟಿ. ನವೀನ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ ನಿಕಟಪೂರ್ವ ಅಧ್ಯಕ್ಷ ರವಿವಾಟೇಖಾನ್. ಸುರೇಂದ್ರ ಕೋಳೂರ್.ಪಿ ಎಂ ಪ್ರಮೋದ್.ಹಾಗೂ ಜೇಸಿರೇಟ್ ಅಧ್ಯಕ್ಷರು ನಿಕಟಪೂರ್ವ ಅಧ್ಯಕ್ಷರುಗಳು ಇದ್ದರು.