ಕಾಫಿನಾಡಿನ ಹೆಗ್ಗುಡ್ಲು ಗ್ರಾಮದಲ್ಲಿ ಹುಲಿ ದಾಳಿಗೆ ಕರು ಬಲಿ


ಮೂಡಿಗೆರೆ :ಹುಲಿ ದಾಳಿಗೆ ಮತ್ತೊಂದು ಕರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೆಗ್ಗುಡ್ಲು ನಲ್ಲಿ ನಡೆದಿದೆ.

ಹುಗ್ಗುಡ್ಲು ಗ್ರಾಮದ ರತ್ನಮ್ಮ ಎಂಬ ಮಹಿಳೆಗೆ ಸೇರಿದ್ದ ಕರುವಾಗಿದೆ. ಜಮೀನಿನಲ್ಲಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡಿದೆ
ಕಳೆದ ಎರಡು ಮೂರು ವರ್ಷ ಗಳಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ, ಭಾರತಿ ಬೈಲ್, ಹೊಕ್ಕಳ್ಳಿ, ಸುತ್ತಾ ಮುತ್ತಾ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಘಟನೆ ನಡೆಯುತ್ತಿದೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.
ಅರಣ್ಯ ವಲಯ ಅಧಿಕಾರಿ ಉಮೇಶ್, ಮತ್ತು ಅರಣ್ಯ ರಕ್ಷಕ ಮೊಸಿನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ .