
ಅಂಚೆ ಕಛೇರಿ ನಿಡುವಾಳೆ: ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ನಿಡುವಾಳೆ ಶಾಖಾ ಅಂಚೆ ಪಾಲಕಿ ಸಿಲ್ವ ಜೆಸಿಂತ ನೆರವು:ಪ್ರಜಾಕೀಯ ಪಕ್ಷದ ಪ್ರಜಾಕಾರ್ಮಿಕ ಸಚಿನ್ ಮರ್ಕಲ್ ಮನವಿಗೆ ಸ್ಪಂದಿಸಿದ ಅಂಚೆ ಇಲಾಖೆ ಮೂಡಿಗೆರೆ ತಾಲ್ಲೂಕು ನಿಡುವಾಳೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇರುವ ಅಂಚೆ ಕಛೇರಿ ಈಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ ಏಕೆಂದರೆ ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಸಮಯಕ್ಕೆ ಹೋಗಿ ಅವರ ಖಾತೆಯಲ್ಲಿ ಇರುವ ಹಣವನ್ನು ತೆಗೆಯಲು ಕಷ್ಟವಾಗುತ್ತಿತ್ತು ಬ್ಯಾಂಕ್ ಅಕೌಂಟ್ ಗೆ ಬಂದಿರುವ ಹಣವನ್ನು 6000 ಸಾವಿರ ಕ್ಕಿಂತ ಹೆಚ್ಚಾಗಿ ಪಡೆಯಲು ಆಗುತ್ತಿರಲಿಲ್ಲ ಕೂಲಿ ಕಾರ್ಮಿಕರಿಗೆ ಇದರಿಂದ ಸಮಸ್ಯೆ ಆಗಿ ಅ ಭಾಗದ ಪ್ರಜಾಕೀಯ ಪಕ್ಷದ ನಿಡುವಾಳೆ ಗ್ರಾಮ ಪಂಚಾಯತಿ ಸದ್ಯಸ ಸಚಿನ್ ಮರ್ಕಲ್ ಅವರಿಗೆ ಕೂಲಿಕಾರ್ಮಿಕರು ಸಮಸ್ಯೆ ಬಗ್ಗೆ ತಿಳಿದಿರುತ್ತಾರೆ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಅಂಚೆ ಇಲಾಖೆಯ ಸಿಲ್ವ ಜೆಸಿಂತ ಅವರಿಗೆ ತಿಳಿಸಿದ ಸಚಿನ್ ಮರ್ಕಲ್ ಗೆ ಹಾಗೂ ಕೂಲಿ ಕಾರ್ಮಿಕರಿಗೆ ಬೆಳಗ್ಗೆ 7 ರಿಂದ ಸಂಜೆ7ರ ವರೆಗೆ ಸೇವೆಯನ್ನು ನೀಡುತ್ತಿರುತ್ತಾರೆ ಇವರ ಈ ಸೇವೆಯಿಂದ ಕೂಲಿ ಕಾರ್ಮಿಕರು ಪ್ರತಿದಿನ ಕೆಲಸ ಮುಗಿಸಿ ಅಂಚೆ ಇಲಾಖೆಗೆ ಹೋದರು ಇವರು ಕೂಲಿ ಕಾರ್ಮಿಕರ ಖಾತೆಯಲ್ಲಿ ಇರುವ ಹಣವನ್ನು ತೆಗೆದುಕೊಡುತ್ತಿರುತ್ತಾರೆ ಇವರ ಈ ಸೇವೆಯಿಂದ ನರೇಗಾ ಯೋಜನೆಯಲ್ಲಿ ಬರುವ ಹಣವನ್ನು ಯಾವುದೇ ಕಷ್ಟ ಇಲ್ಲದೇ ಅದನ್ನು ತೆಗೆದುಕೊಳ್ಳುತ್ತಾರೆ ಅಂಚೆ ಇಲಾಖೆಯ ಈ ಸೌಲಭ್ಯ ಹಾಗೂ ಸಿಲ್ವಿ ಜೆಸಿಂತ ಅವರ ಕಾರ್ಯವೈಖರಿ ಇಂದ ಈಗ ಗ್ರಾಮದ ಜನರು ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡುವುದು ಬಿಟ್ಟು ಅಂಚೆ ಇಲಾಖೆಯ ಕಡೆಗೆ ತೀರುಗಿರುತ್ತಾರೆ ಹಾಗೂ ಯಾವುದೇ ಸಮಯದಲ್ಲೂ ಜನಗಳಿಗೆ ಸ್ಪಂದಿಸುವ ಸಿಲ್ವಿ ಜೆಸಿಂತ ಅವರು ಬ್ಯಾಂಕ್ ಗಳಿಗಿಂತ ಹೆಚ್ವಿನ ಸೇವೆಯನ್ನು ಜನರಿಗೆ ನೀಡುತ್ತಿರುತ್ತಾರೆ,ಬ್ಯಾಂಕ್ ಗೆ ಹೋದರು ಕೂಲಿ ಕಾರ್ಮಿಕರಿಗೆ ಸ್ಪಂದಿಸಿದ ಬ್ಯಾಂಕ್ ಸಿಬ್ಬಂದಿ ಗಳಿಗಿಂತ ಅಂಚೆ ಇಲಾಖೆಯಲ್ಲಿ ಬ್ಯಾಂಕ್ ಅದರದ ಮೇಲೆ 20ಸಾವಿರ ಹಣವನ್ನು ಪ್ರತಿನಿತ್ಯ ನೀಡುವ ಅಂಚೆ ಇಲಾಖೆಯ ಈ ಸೇವೆ ಜನಗಳಿಗೆ ಸಲುವಾಗಿ ವ್ಯವಹರಿಸುವಂತೆ ಆಗಿದೆ, ಸೆಂಟ್ರಲ್ ಗವರ್ನಮೆಂಟ್ ಅಂಚೆ ಇಲಾಖೆ ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯಲು ಹಾಗೂ ಹಣವನ್ನು ಡ್ರಾ ಮಾಡಿಸಿ ಕೊಳ್ಳಲು ನೇರವಾಗುತ್ತಿರುವ ಅಂಚೆ ಇಲಾಖೆಯ ಅಂಚೆ ಪಾಲಕಿ ಅವರಿಗೆ ಹಾಗೂ ನರೇಗಾ ಯೋಜನೆಯ ಹಣವನ್ನು ಅಂಚೆ ಇಲಾಖೆಯಲ್ಲಿ ಪಡೆಯುವುದು ಹೇಗೆ ಎಂದು ಊರಿನ ಜನಗಳನ್ನು ಕರೆದುಕೊಂಡು ಹೋಗಿ ಅವರಿಗೆ ಅಂಚೆ ಇಲಾಖೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟ ಸಚಿನ್ ಮರ್ಕಲ್ ಅವರಿಗೆ ಅ ಊರಿನ ಜನಗಳಿಂದ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿ ಆಗಿರುತ್ತಾರೆ.