ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ಮನೆ ಮಂದಿ ಪ್ರಾಣಪಾಯದಿಂದ ಪಾರು


ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ಪರದಾಡುವಂತಾಗಿದೆ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆ ಹಿನ್ನಲೆ ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದ ಮೊಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣವಾಗಿ ನೆಲಕಚ್ಚಿದೆ . ಮನೆ ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಹಾನಿಯಾಗಿವೆ.
ಇನ್ನೂ ಮನೆಯವರು ಮನೆಯ ಮುಂದೆ ಇದ್ದ ವೇಳೆ ಮನೆ ಕುಸಿತವಾಗಿದ್ದು, ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಕಳೆದ ವರ್ಷದ ಮಹಾ ಮಳೆಗೆ ಮೊಣಪ್ಪ ಪೂಜಾರಿ ಅವರ ಮನೆಯ ಹಿಂದಿನ ಗೋಡೆ ಕುಸಿತ ಗೊಂಡಿತ್ತು ಒಂದು ವರ್ಷ ಕಳೆದರೂ ಸರ್ಕಾರ ದಿಂದ ಯಾವುದೇ ಪರಿಹಾರ ದೊರೆಯದೆ ಪ್ಲಾಸ್ಟಿಕ್ ನಿಂದ ಮರೆ ಮಾಚಿದ್ದರು ಈಗ ಮತ್ತೆ ಮಳೆಗೆ ಮನೆಯ ಇನ್ನೊಂದು ಬದಿಯ ಗೋಡೆ ಕುಸಿತಗೊಂಡಿದೆ ಈ ಘಟನೆಯಿಂದ ಮೊಣಪ್ಪರವರಿಗೆ ದಿಕ್ಕೇ ತೋಚದಂತಾಗಿದೆ
ರಾಜ್ಯ ಸರಕಾರ ನಿವೇಶನ ಕಳೆದುಕೊಂಡ ಸಂತ್ರಸ್ತರಿಗೆ ಒಂದು ವರ್ಷ ಕಳೆದರೂ ಪರಿಹಾರ ನೀಡದೆ ಇರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಇದು ಒಬ್ಬರ ಸಮಸ್ಯೆ ಮಾತ್ರವಲ್ಲ ಇಂತಹ ನೂರಾರು ಕುಟುಂಬಗಳು ಇದುವರೆಗೂ ಪರಿಹಾರ ಸಿಗದೆ ನೊಂದಿದ್ದಾರೆ ಇನ್ನಾದ್ರು ಸರ್ಕಾರ ಮತ್ತೊಮ್ಮೆ ಇಂತಹ ಉಳಿದ ಜನರ ಕಡೆ ಗಮನ ಹರಿಸಿ ಪರಿಹಾರ ನೀಡಲಿ ಎನ್ನುವುದು ಜನರ ಆಶಯ.