ಬಣಕಲ್ ಸುತ್ತ ಮುತ್ತ ಸಡಗರ ಸಂಭ್ರಮದ ರಕ್ಷಾ ಬಂಧನ

ಬಣಕಲ್ : ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನವನ್ನು ತಾಲ್ಲೂಕ್ಕಿನ ಸುತ್ತ ಮುತ್ತ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು. ನೂಲಹುಣ್ಣಿಮೆಯ ದಿನವಾದ ಭಾನುವಾರವೇ ರಕ್ಷಾ ಬಂಧನ ಇದ್ದಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ನೀಡಿತ್ತು. ಬೆಳಗ್ಗೆಯೇ ಹೆಂಗಳೆಯರು ಸಡಗರ-ಸಂಭ್ರಮದಿಂದ ತಮ್ಮ ಸಹೋದರರಿಗೆ ಬಣ್ಣ ಬಣ್ಣದ ರಾಖಿಗಳನ್ನು ಕಟ್ಟಿ, ಕುಂಕುಮ ತಿಲಕವಿಟ್ಟು ಆರತಿ ಮಾಡಿದರು.


ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನವನ್ನು ಬಣಕಲ್ ಮತ್ತಿಕಟ್ಟೆ ಸುಭಾಷ್ ನಗರ ಸೇರಿದಂತೆ ಗ್ರಾಮದ ಸುತ್ತ ಮುತ್ತ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು. ನೂಲಹುಣ್ಣಿಮೆಯ ದಿನವಾದ ಭಾನುವಾರವೇ ರಕ್ಷಾ ಬಂಧನ ಇದ್ದಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ನೀಡಿತ್ತು. ಬೆಳಗ್ಗೆಯೇ ಹೆಂಗಳೆಯರು ಸಡಗರ-ಸಂಭ್ರಮದಿಂದ ತಮ್ಮ ಸಹೋದರರಿಗೆ ಬಣ್ಣ ಬಣ್ಣದ ರಾಖಿಗಳನ್ನು ಕಟ್ಟಿ, ಕುಂಕುಮ ತಿಲಕವಿಟ್ಟು ಆರತಿ ಮಾಡಿದರು.

ನಂತರ ಸಹೋದರರಿಗೆ ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ರಕ್ಷಾ ಬಂಧನದ ಶುಭಾಶಯ ಕೋರಿದರು. ಇನ್ನು ರಾಖಿ ಕಟ್ಟಿಸಿಕೊಂಡ ಸಹೋದರರು ತಮ್ಮ ಸಹೋದರಿಯರಿಗೆ ನಮಿಸುವ ಜತೆಗೆ ಉಡುಗೂರೆ ಹಾಗೂ ಹಣವನ್ನು ಆರತಿ ತಟ್ಟೆಯಲ್ಲಿ ಹಾಕಿ ಆಶೀರ್ವಾದ ಪಡೆದುಕೊಂಡರು.
ಉಳಿದಂತೆ ಬಹುತೇಕ ಯುವಕ-ಯುವತಿಯರು ಹಾಗೂ ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು.

ಗೃಹಿಣಿಯರು ರಕ್ಷಾ ಬಂಧನ ಹಿನ್ನೆಲೆ ಮನೆಯಲ್ಲಿ ವಿಶೇಷ ಭಕ್ಷ್ಯ ಭೋಜನ ಹಾಗೂ ಸಿಹಿ ಪದಾರ್ಥಗಳನ್ನು ತಯಾರಿಸಿದ್ದರು. ಮಾರುಕಟ್ಟೆ ಹಾಗೂ ಕಾಲೊನಿಯ ಅಂಗಡಿಗಳಲ್ಲಿ ವಿವಿಧ ಬಣ್ಣದ ಆಕರ್ಷಕ ರಾಖಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಸಂಜೆಯವರೆಗೂ ರಾಖಿ
ಯುವಕ-ಯುವತಿಯರು ಸೇರಿದಂತೆ ಮಕ್ಕಳು ರಾಖಿ ಖರೀದಿಸಿದರು. ಮತ್ತೆ ಕೆಲವರು ತಮ್ಮ ದೂರದ ಸಹೋದರನಿಗೆ ಅಂಚೆ ಮೂಲಕ ರಾಖಿ ಕಳುಹಿಸುತಿದ್ದ ದೃಶ್ಯ ಕಂಡು ಬಂತು ರಾಖಿ ಅನ್ನೋದು ನಮಗೆ ರಕ್ಷಾ ಕವಚವಿದ್ದಂತೆ. ರಾಖಿ ಕಟ್ಟಿಸಿಕೊಳ್ಳೊದರಿಂದ ನಮ್ಮ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವಂತಾಗುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿದೆ.