ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಮರ್ಕಲ್ ನಿಂದ ಊಹೆಗೂ ನಿಲುಕದ ಯೋಚನೆಗಳ ಸೌಲಭ್ಯ ಹಾಗೂ ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ ಕೆಲಸ ನೀಡುವ ಇವರ ಕಾರ್ಯ ವೈಖರಿ ನಿಜಕ್ಕೂ ಹುಬ್ಬರಿಸುವಂತಾಗಿದೆ ಈ ರೀತಿಯ ಜನಪ್ರಿಯ ಕಾರ್ಯಗಳಿಂದಲೇ ಸಚಿನ್ ಮರ್ಕಲ್ ರವರು ಮನೆ ಮಾತಾಗಿದ್ದಾರೆ ಯಾವುದೇ ದೊಡ್ಡ ದೊಡ್ಡ ಪಕ್ಷಗಳ ಬೆಂಬಲವಿಲ್ಲದೆ ಬರೀ ಪ್ರಜಾಕೀಯದ ವಿಚಾರದಾರೆಗಳನ್ನುಮಾತ್ರ ಇಟ್ಟುಕೊಂಡು ಚುನಾವಣೆಗೆ ಸ್ಪರ್ದಿಸಿ ಅದರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು .

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಜಾಕೀಯ ವಿಚಾರಗಳನ್ನು ಮನೆ ಮನೆಗೆ ತಲುಪಿಸಿ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಸರ್ಕಾರದ ಸೌಲಭ್ಯಗಳನ್ನು ಹಾಗೂ ಯೋಚನೆಗಳಿಂದ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುತ್ತೇನೆ ಎಂದು ತಿಳಿಸಿದ್ದ ಪ್ರಜಾಕೀಯ ಪಕ್ಷದ ಸಚಿನ್ ಮರ್ಕಲ್ ಈಗ ಇದನ್ನು ಈಡೇರಿಸುವಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ
ನಿಡುವಾಳೆ ಗ್ರಾಮ ಪಂಚಾಯತಿಯ ನೂತನ ಸದಸ್ಯ (ಪ್ರಜಾಕಾರ್ಮಿಕ) ಸಚಿನ್ ಮರ್ಕಲ್ ಎಂಬವರು ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ನೀಡಿದ ವಿಚಾರ ಈಡೇರಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದವರಿಗೆ ಮತದಾರರು ನೆನಪಾಗುವುದು ಮತ್ತೆ ಚುನಾವಣೆ ಬಂದಾಗಲೆ ಎಂಬ ಮಾತಿದೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ನಿಡುವಾಳೆ ಗ್ರಾಮ ಪಂಚಾಯತಿಯಿಂದ ಕಳೆದ ಬಾರಿ ನೂತನವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಸಚಿನ್ ಮರ್ಕಲ್ ಚುನಾವಣಾ ಪ್ರಚಾರದ ವೇಳೆ ತಮ್ಮನ್ನು ಗೆಲ್ಲಿಸಿದರೆ ಸರ್ಕಾರದಿಂದ ಬರುವ ಅನುದಾನವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸೋ ಭರವಸೆ ನೀಡಿದ್ದರು ಕೊಟ್ಟ ಮಾತಿನಂತೆ ಜನಪರ ಕಾರ್ಯಗಳಲ್ಲಿ ತಮ್ಮನ್ನುತೊಡಗಿಸಿ ಕೊಳ್ಳುತ್ತಿದ್ದಾರೆ ಸರ್ಕಾರದಿಂದ ಏನೆಲ್ಲಾ ಸವಲತ್ತುಗಳು ಇದೆ ಎಂಬುದನ್ನು ಮಾಹಿತಿ ನೀಡುತ್ತಿದ್ದಾರೆ ಅದು ಮಾತ್ರ ವಲ್ಲದೆ ರಸ್ತೆ ಬಾಕ್ಸ್ ಚರಂಡಿ ಕುಡಿಯುವ ನೀರು ಹೀಗೆ ಜನರಿಗೆ ಬೇಕಾದ ಮೂಲ ಸೌಕರ್ಯ ಗಳನ್ನು ಒದಗಿಸೋ ಕಡೆ ಗಮನ ಹರಿಸುತ್ತಿದ್ದಾರೆ ನಿಡುವಾಳೆ ಗ್ರಾಮ ಪಂಚಾಯಿತಿ ಮರ್ಕಲ್ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯದ ಸಮಸ್ಯೆ ಆಗಿತ್ತು ಏಕೆಂದರೆ ಕುಡಿಯುವ ಬಾವಿಯ ಮೋಟಾರ್ ತುಂಬಾ ಹಳೆಯದಾಗಿತ್ತು ಮರ್ಕಲ್ ಗ್ರಾಮದ ಸಾಕಷ್ಟು ಮನೆಗಳಿಗೆ ಇದೆ ಬಾವಿಯಿಂದ ನೀರು ಸರಬರಾಜು ಆಗುತಿತ್ತು ಕೆಲವು ದಿನಗಳ ಇಂದೆ ಮೋಟರ್ ಹಾಳಾಗಿ ಊರಿನಲ್ಲಿ ನೀರಿನ ಸಮಸ್ಯೆ ಉದ್ಭವವಾಗಿತ್ತು ಪದೇ ಪದೇ ಈ ಸಮಸ್ಯೆ ಅರಿತ ಸಚಿನ್ ಮರ್ಕಲ್ ರವರು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಹೊಸಮೋಟರ್ ಅಳವಡಿಸಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಿದರು ಹಾಗೆ ಮರ್ಕಲ್ ಗ್ರಾಮದ ಕೆಳ ಮರ್ಕಲ್ ಭಾಗದ ದಲ್ಲಿ ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ ಮಾಡಬೇಕೆಂದು ಆದೇಶ ಹೊರಹಾಕಿತ್ತು ಹಾಗೂ ಅದನ್ನು ನಿರ್ಮಾಣ ಮಾಡಲು ಸರ್ಕಾರವೇ 14000/ಸಾವಿರ ನೀಡುತ್ತದೆ ಸರ್ಕಾರ ಈ ಹಣ ನೀಡುವ ಮೊದಲು ಇಂಗು ಗುಂಡಿಯನ್ನು ನಿರ್ಮಾಣ ಮಾಡಿರಬೇಕು ಆದರೆ ಲಾಕ್ ಡೌನ್ ನಿಂದ ಕೆಲಸವೂ ಇಲ್ಲದೆ ಇಂಗು ಗುಂಡಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಹಣದ ಸಮಸ್ಯೆಯಾಗಿ ಇಂಗು ಗುಂಡಿ ನಿರ್ಮಾಣ ಮಾಡಲು ಸಮಸ್ಯೆ ಆಗಿ ಆದರ ನಿರ್ಮಾಣ ಮಾಡಿರಲಿಲ್ಲ ಈ ವಿಷಯವನ್ನು ಅಲ್ಲಿಯ ಸ್ಥಳೀಯ ಯುವಕರು ಸಚಿನ್ ರವರ ಗಮನಕ್ಕೆ ತಂದರು ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಇಂಗು ಗುಂಡಿ ನಿರ್ಮಾಣ ಮಾಡಲು ಸಾಲದ ರೂಪದಲ್ಲಿ ಇಂಗು ಗುಂಡಿ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟಿರುತ್ತಾರೆ ಹಾಗೆ ಇಂಗು ಗುಂಡಿ ನಿರ್ಮಾಣವಾದ ಬಳಿಕ ಅದಕ್ಕೆ ಬರುವ ಹಣವನ್ನು ಅವರಿಗೆ ಹಿಂತಿರುಗಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆೆ .

