ಚಿಕ್ಕಮಗಳೂರು:
ಬಣಕಲ್- ಅಕ್ರಮವಾಗಿ ಗೋಸಾಗಾಟಕ್ಕೆ ಯತ್ನಿಸಿದ ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಬಣಕಲ್ ಹೋಬಳಿಯ ಕೋಳೂರು ಗ್ರಾಮದ ರಸ್ತೆಯ ಬದಿ ಮಲಗಿರುವ ಜಾನುವಾರುಗಳನ್ನು ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಆಗಮಿಸಿದ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ನೇತೃತ್ವದಲ್ಲಿ , ಇಬ್ಬರು ಆರೋಪಿಗಳನ್ನು ವಾಹನ ಸಮೇತ ಬಂಧಿಸಿ ಹಾಗೂ 7 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಬೇಲೂರು ತಾಲ್ಲೂಕಿನ ತೊಳಲು ಗ್ರಾಮದ ಅಹಮದ್ ಹನೀಫ್, ಮತ್ತೊಬ್ಬ ಆರೋಪಿ ಬೇಲೂರಿನ ಹೊಸನಗರ ದೇವರಾಜ್,
ಗೋವುಗಳನ್ನು ಕದ್ದು ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
