ಮೂಡಿಗೆರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬಜರಂಗದಳ ವತಿಯಿಂದ ಪಂಜಿನ ಮೆರವಣಿಗೆ

ಮೂಡಿಗೆರೆ: ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಮೂಡಿಗೆರೆಯ ಬಜರಂಗದಳ ವತಿಯಿಂದ ಮೂಡಿಗೆರೆ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ವೃತ್ತದವರೆಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು ನಂತರ ಲಯನ್ಸ್ ವೃತ್ತದಲ್ಲಿ ಸಭೆ ಸೇರಿ ಅಖಂಡ ಭಾರತದ ಬಗ್ಗೆ ಮತ್ತು ನಮ್ಮ ಭಾರತವನ್ನು ಹೇಗೆ ತುಂಡುತುಂಡಾಗಿ ಬೇರ್ಪಡಿಸಲಾಗಿದೆ ಮತ್ತು ಅದನ್ನು ನಾವೆಲ್ಲರೂ ಸೇರಿ ಮತ್ತೆ ಪರಿಪೂರ್ಣ ಅಖಂಡ ಭಾರತವನ್ನಾಗಿ ಮಾಡುವ ಸಂಕಲ್ಪವನ್ನು ಮಾಡಲಾಯಿತು ದಿಕ್ಸೂಚಿ ಭಾಷಣಕಾರರಾಗಿ
ರಘು ಸಕಲೇಶಪುರ ಪ್ರಾಂತ ಸಂಯೋಜಕರು ಬಜರಂಗದಳ ಕರ್ನಾಟಕ ಮಾತನಾಡಿದರು ಈ ಸಮಯದಲ್ಲಿ
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸಾಲುಮರದ ಮಹೇಶ್ . ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪ್ರವೀಣ್ ಪೂಜಾರಿ ಬಜರಂಗದಳದ ತಾಲೂಕು ಸಂಚಾಲಕ ವಿನಯ ಶೆಟ್ಟಿ
ಸಹ ಸಂಚಾಲಕ ಅಜಿತ್ ಜೆನ್ ಬೈಲ್, ದೀಕ್ಷಿತ್ ಕೊಟ್ಟಿಗೆಹಾರ
ಸುರಕ್ಷಾ ಪ್ರಮುಖ್ ಸಂತೋಷ ನಗರ ಪ್ರಮುಖ್ ಮದನ್ ಕುಮಾರ್. ಪ್ರಣಿತ್ ಮನೋಜ್ .ಚಿರಾಗ್ ಹಾರ್ಮಕ್ಕಿ. ಅವಿನಾಶ್ ಜನ್ನಾಪುರ. ಚಿರಾಗ್ ಕೊಟ್ರ ಕೆರೆ. ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು