ಕಾಂಗ್ರೆಸ್ ವಕ್ತಾರ ಅನಂತ್ ಮೇಲೆ ಕೋಮುಗಲಭೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಆಗ್ರಹ

ದೇವಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಬಗ್ಗೆ ಲಘುವಾಗಿ ಮಾತನಾಡಿದ ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು

ಸಿಟಿ ರವಿಯವರ ಅವರ ಅರ್ಥ ಪೂರ್ಣ ಹೇಳಿಕೆಯನ್ನು ತಿರುಚಿ ಮಾತೆ ಅನ್ನಪೂರ್ಣೇಶ್ವರಿ. ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ, ಪತ್ರಿಕಾ ಪ್ರಕಟಣೆ ನೀಡಿದ ಕಾಂಗ್ರೆಸ್ ವಕ್ತಾರ ಅನಂತ್ ಅವರ ವಿರುದ್ಧ ಕೋಮುಗಲಭೆಗೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಅಗ್ರಹಿಸಿ ಹಾಗೂ ಅವರು ಅನ್ನಪೂರ್ಣೆ ಸನ್ನಿಧಿಯಲ್ಲಿ ಬಹಿರಂಗವಾಗಿ ಪತ್ರಿಕಾ ಗೋಷ್ಠಿಯಲ್ಲಿ ಕ್ಷಮೆಯಾಚಿಸಬೇಕು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮ ಕೈಕೊಳ್ಳಬೇಕು ಎಂದು ಬಿಜೆಪಿ ಯುವಮೋರ್ಚಾ ದಿಂದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಜನ್ನಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್, ರೈತ ಮೋರ್ಚಾ ತಾಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಪಂಚಾಕ್ಷರಿ,ಜಿಲ್ಲಾ ಉಪಾಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಮಿಥುನ್ ಬೆಳ್ಳಿ ,ಶ್ರೇಯಸ್,ಗಿರೀಶ್ ಹಳ್ಳಿಬೈಲ್, ಗಿರೀಶ್ ಹೆಸ್ಗಲ್,ಚಿರಾಗ್ ಕೊಟ್ರಕೆರೆ, ಗಾನವ್,ರಘುಪತಿ ಬಾಳೂರು,ಮಂಜುನಾಥ್ ಜಾವಳಿ,, ಅರುಣ್ ಕುಂಬರಡಿ ,ಸಚಿನ್ ಬಾನಳ್ಳಿ,ಪ್ರಸಾದ್ ಹುಲ್ಲೆಮನೆ, ಶಶಿ ಕೆಲ್ಲೂರು ಉಪಸ್ಥಿತರಿದ್ದರು.