ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಇವರ ವತಿಯಿಂದ ಇಂದು ಮೂಡಿಗೆರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕನ್ನು ಸೇರ್ಪಡಿಸಿ ಎಂದು ರಾಜ್ಯ ಮುಖ್ಯಮಂತ್ರಿ ಗಳಲ್ಲಿ ಮನವಿ ಪತ್ರವನ್ನು ತಹಸೀಲ್ದಾರ್ ಮುಕಾಂತರ ಸಲ್ಲಿಸಿದರು
ರಾಜ್ಯ ಸರ್ಕಾರ 2021 ನೇ ಸಾಲಿನ ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳನ್ನು ಘೋಷಿಸಲಾಗಿದ್ದು, ಕರ್ನಾಟಕದ 13 ಜಿಲ್ಲೆಗಳ 61 ತಾಲ್ಲೂಕುಗಳು ಸೇರ್ಪಡೆಗೊಂಡಿವೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸ ತಾಲ್ಲೂಕನ್ನು ಕೈ ಬಿಟ್ಟಿರುವುದರಿಂದ ನೈಜ ಅತಿವೃಷ್ಟಿ ಪ್ರದೇಶವನ್ನು ಕಡೆಗಣಿಸಲಾಗಿದೆ …
ಕಳೆದ 3 ವರ್ಷಗಳಿಂದ ಮಲೆನಾಡಿನ ಭಾಗಗಳಾದ ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳಲ್ಲಿ 12500 ಮಿ ಮೀ ಗೂ ಅಧಿಕ ಮಳೆ ಬೀಳುತ್ತಿದ್ದು...
ಕಳೆದ 3 ವರ್ಷಗಳ ಹಿಂದೆ ಮೇಘ ಸ್ಫೋಟ ಹಾಗೂ ಭೂ ಕುಸಿತಗಳಿಂದ ಆದ ಅನಾಹುತಗಳಿಂದ ಇನ್ನೂ ಮೂಡಿಗೆರೆ ಮತ್ತು ಕಳಸ ಭಾಗದ ಜನರು ಮತ್ತು ರೈತರು ಜೀವನ ಕಟ್ಟಿಕೊಳ್ಳಲು ಸಾಧ್ಯ ವಾಗಿಲ್ಲ …
ಆಲೇಖಾನ್ ಹೊರಟ್ಟಿ, ಜವಳಿ ಬಾಳೂರು, ಕಳಸ ,ಕೊಟ್ಟಿಗೆಹಾರ ಬಣಕಲ್ ಹಂತೂರು ಕಣಚೂರು ಇನ್ನೂ ಅನೇಕ ಭಾಗಗಳಲ್ಲಿ ಅತಿ ಹೆಚ್ಚು ಅನಾಹುತ ಸಂಭವಿಸಿತು
ಅಂಥ ಸಂದರ್ಭದಲ್ಲಿ ಮೂಡಿಗೆರೆ ಮತ್ತು ಕಳಸ ಭಾಗಗಳಿಗೆ ಜನಪ್ರತಿನಿಧಿಗಳು ಹಾಗೂ ಮಂತ್ರಿಗಳು ಹಾಗೂ ಅಧಿಕಾರಿಗಳು ಬಂದು ಪರಿಸ್ಥಿತಿಯನ್ನು ವೀಕ್ಷಿಸಿ ಕೊಟ್ಟ ಭರವಸೆಗಳು ಇನ್ನೂ ಈಡೇರಿಲ್ಲ .ರೈತರ ,ಕೂಲಿ ಕಾರ್ಮಿಕರ, ಕಡುಬಡವರ ಜೀವನ ಕೊಚ್ಚಿ ಹೋಗಿದೆ .
ಹಾಗೂ ಮಲೆನಾಡಿನ ಭಾಗದ ಬೆಳೆಗಳಾದ ಕಾಫಿ, ಅಡಿಕೆ, ಮೆಣಸು ಏಲಕ್ಕಿ,ಭತ್ತ ಅತಿಹೆಚ್ಚು ಮಳೆಗಳಿಂದ ಕೊಳೆಯುತ್ತಿದೆ ಹಾಗೂ ಉತ್ಪಾದನೆಯಲ್ಲಿ ಕುಂಠಿತ ವಾಗುತ್ತಿದೆ …ಮಳೆಗಾಳಿಯಿಂದ ಬಿದ್ದಿರುವ ಎಷ್ಟೋ ಮನೆಗಳು ಇನ್ನೂ ನಿರ್ಮಾಣವೇ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ..ರಸ್ತೆ ಸಂಪರ್ಕಗಳು ಮತ್ತು ರಸ್ತೆಗಳು ತೀರಾ ಹದಗೆಟ್ಟು ಹೋಗಿವೆ …ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಮ್ಮ ಮೂಡಿಗೆರೆ ಹಾಗೂ ಕಳಸ ತಾಲೂಕನ್ನು ಅತಿವೃಷ್ಟಿ ಪ್ರದೇಶದಿಂದ ಕೈಬಿಟ್ಟಿರುವುದು ದುರದೃಷ್ಟಕರ ! ನೈಜವಾಗಿ ಪ್ರಥಮ ಸ್ಥಾನದಲ್ಲಿ ಅತಿವೃಷ್ಟಿ ಪ್ರದೇಶದಗಳಾನ್ನಾಗಿ ಗುರುತಿಸಬೇಕಾಗಿದ್ದ ತಾಲ್ಲೂಕುಗಳನ್ನೇ ಕೈಬಿಟ್ಟಿರುವುದರಿಂದ ಇಲ್ಲಿನ ಜನತೆಗೆ ಮತ್ತು ರೈತರಿಗೆ ಅನ್ಯಾಯವಾಗಿದೆ ..
ಆದುದರಿಂದ ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಸಂಘಟನೆಯ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಮೂಡಿಗೆರೆ ತಾಲೂಕನ್ನು ಮತ್ತು ಕಳಸ ತಾಲೂಕನ್ನು ಅತಿವೃಷ್ಟಿ ಪ್ರದೇಶಗಳಿಗೆ ಸೇರಿಸಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ
ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಅಧ್ಯಕ್ಷರಾದ ಕಡಿದಳ್ ಬ್ರಿಜೇಶ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಬಕ್ಕಿ ಹಾಗೂ ಕೆಂಪೇಗೌಡ ಒಕ್ಕಲಿಗರ ವೇದಿಕೆಯಾ ಸರ್ವ ಸದಸ್ಯರು ಉಪಸ್ಥಿತರಿದ್ದರು