ನಾವು ಪೂಜಿಸುವ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಕಾಂಗ್ರೆಸ್ ಮುಖಂಡ ಅನಂತು ಎಂಬುವರು ಅವಹೇಳನ ಕಾರಿಯಾಗಿ ಇಂದಿರಾ ಗಾಂಧಿ ವಿಶ್ವಕ್ಕೆ ಗೊತ್ತು ಅನ್ನಪೂರ್ಣೇಶ್ವರಿ ಯಾರು ಎಂದು ಅವಹೇಳನ ಮಾಡಿದ್ದು ಇನ್ನೂ ಮುಂದುವರಿದು ಸೀಟಿ ರವಿ ಅವರಿಗೂ ಅನ್ನಪೂರ್ಣೇಶ್ವರಿಗು ಏನು ಸಂಬಂಧ ಎಂದು ಅವಹೇಳನೆ ಮಾಡಿರುತ್ತಾರೆ.
ಅನಂತು ರವರೆ ನೀವು ಯಾವುದರಲ್ಲಿ ಬೇಕಾದರು ರಾಜಕೀಯ ಮಾಡಿ ಅದು ನಿಮಗೆ ಬಿಟ್ಟದ್ದು ನೀವು ಯಾರನ್ನು ಓಲೈಸಲು ಹೋಗಿ ಬಹುಸಂಖ್ಯಾತ ಹಿಂದುಗಳ ಆರಾಧ್ಯದೈವ ಶ್ರೀ ಅನ್ನಪೂರ್ಣೇಶ್ವರಿ ಮಾತೆಯನ್ನು ಅವಮಾನಿಸಿದ್ದಾರೆ ನಿಮ್ಮ ರಾಜಕೀಯ ಬೇಳೆ ಬೇಯಿಸಲು ಬಹುಸಂಖ್ಯಾತ ಹಿಂದೂಗಳೂ ಪೂಜಿಸುವ ದೇವತೆಯನ್ನು ಅವಮಾನ ಮಾಡುವುದು ಸರಿಯಲ್ಲ ಅನಂತು ಅವರೇ ಇಂದಿರಾ ಕ್ಯಾಂಟೀನ್ ನಲ್ಲಿ ತಿನ್ನುವ ಜನರಿಗಿಂತ ಹೆಚ್ಚಾಗಿ ಪ್ರತಿದಿನ ಶ್ರೀ ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಸಾವಿರಾರು ಜನ ಅನ್ನದಾನದ ರೂಪದಲ್ಲಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಾ ರೆ ನೀವು ಯಾವುದರಲ್ಲಿ ಬೇಕಾದರೂ ರಾಜಕೀಯ ಮಾಡಿ ನಮಗೂ ಅದಕ್ಕೂ ಸಂಬಂಧವಿಲ್ಲ ಆದರೆ ನಮ್ಮ ಧರ್ಮ ನಂಬಿಕೆ ಮೇಲೆ ಅವಹೇಳನೆ ಮಾಡಿದಲ್ಲಿ ನಾವು ಸಹಿಸುವುದಿಲ್ಲ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಿಗೆರೆ ನಿಮಗೆ ಸೋಮವಾರದವರೆಗೂ ಸಮಯವನ್ನು ನೀಡುತ್ತಿದ್ದು ನೀವು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ವಿಶ್ವ ಹಿಂದು ಪರಿಷದ್ ಬಜರಂಗದಳ ವತಿಯಿಂದ ನಿಮ್ಮ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು
ವಿನಯ್ ಶೆಟ್ಟಿ
ಬಜರಂಗದಳ ತಾಲೂಕು ಸಂಚಾಲಕ
ಮೂಡಿಗೆರೆ