ಭಾರಿ ಮಳೆಯಿಂದ ನೆಲೆ ಕಳೆದುಕೊಂಡ ಸಂತ್ರಸ್ತರು ; ಹುಸಿಯಾದ ಭರವಸೆ- ಕಪ್ಪು ಪಟ್ಟಿ ಧರಿಸಿ ಮೌನಪ್ರತಿಭಟನೆ‌

ಚಿಕ್ಕಮಗಳೂರು :ನೆರೆ ಹಾವಳಿಯಿಂದ ಬದುಕು ಕಳೆದುಕೊಂಡು 2 ವರ್ಷ ಕಳೆದರೂ ಪುನರ್ವಸತಿ‌ ಕಲ್ಪಿಸದ ಜನಪ್ರತಿನಿಧಿಗಳ ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಜಾವಳಿ ನಾಡಕಚೇರಿ ಮುಂಭಾಗ ನೆರೆಸಂತ್ರಸ್ತರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ನೆರೆಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಸೇರಿದಂತೆ‌ ಜನಪ್ರತಿನಿಧಿಗಳು ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು . ಜನಪ್ರತಿನಿಧಿಗಳು ಕೇವಲ ಭರವಸೆ ಸೀಮಿತವಾಗಿದ್ದಾರೆ. ಪುನರ್ವಸತಿ ಕಲ್ಪಿಸುವಂತೆ ಹಲವು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದು ಸೋತಿದ್ದೇವೆ. ಆಡಳಿತ ಯಂತ್ರದ ಮೇಲಿನ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಬೇಸರ ಹೊರಹಾಕಿದರು