ಶಾಂತಿನಗರ ಇಂದಿರಾನಗರ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ನರಕಕ್ಕೆ ಹೋದ ಅನುಭವ ನಿಶ್ಚಿತ! ಗ್ರಾಮಸ್ಥರಿಂದ ಗುಂಡಿ ಬಿದ್ದ ರಸ್ತೆಯಲ್ಲಿ ಗಿಡ ನೆಟ್ಟು ಆಕ್ರೋಶ

ಬಣಕಲ್ ಗ್ರಾಮದ ಇಂದಿರಾ ನಗರ ಹಾಗೂ ಶಾಂತಿನಗರ ವ್ಯಾಪ್ತಿಯ ರಸ್ತೆಯ ಸ್ಥಿತಿ ಕಂಡರೆ ನಿಜಕ್ಕೂ ಆಶ್ಚರ್ಯ ಪಡುವುದರಲ್ಲಿ ಅನುಮಾನವೇ ಇಲ್ಲ ಯಾಕೆಂದರೆ ಕೂಡಹಳ್ಳಿ ಕ್ಷೇತ್ರದ ಜನರು ಕಳೆದ 50ವರ್ಷಗಳಿಂದ ಒಂದೇ ರಾಜಕೀಯ ಪಕ್ಷದ ಮೇಲೆ ನಂಬಿಕೆ ಇಟ್ಟು ಬೆಂಬಲಿಸುತ್ತಾ ಬಂದಿದ್ದಾರೆ ಆದರೆ ಗ್ರಾಮಸ್ಥರು ನಂಬಿಕೆ ಇಟ್ಟುಕೊಂಡು ಇದುವರೆಗೂ ಬೆಂಬಲಿಸುತ್ತಾ ಬಂದ ಕ್ಷೇತ್ರ ಇದೇನಾ ಎಂಬುದು ನಿಜಕ್ಕೂ ಆಶ್ಚರ್ಯ ಪಡುವಂತಾಗಿದೆ ಕೂಡಹಳ್ಳಿ ಕ್ಷೇತ್ರದಿಂದ ಐದು ಜನ ಜನಪ್ರತಿನಿದಿಗಳನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿಗೆ ಕಳುಹಿಸಿದ ಕ್ಷೇತ್ರ ಇದೇನಾ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳೋ ಪರಿಸ್ಥಿತಿ ಬಂದೋದಗಿದೆ ಯಾಕೆಂದರೆ ನಿಮಗೆ ನರಕದ ಅನುಭವವಾಗಬೇಕೆಂದರೆ ಒಮ್ಮೆ ನೀವು ಈ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಸಾಕು ಸತ್ತು ಬದುಕಿದ ಅನುಭವ ಆಗುತ್ತದೆ.

ಪೊಲೀಸ್ ಠಾಣೆ ಮುಖ್ಯ ರಸ್ತೆಯಿಂದ ಶಾಂತಿ ನಗರದ ವರೆಗೆ ಹಾದು ಹೋಗಿರುವ ರಸ್ತೆ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದ್ದು ಅಪಾಯವನ್ನು ಅಹ್ವಾನ ನೀಡುವ ಸ್ಥಿತಿಯಲ್ಲಿದೆ ಇಂದು ಶಾಂತಿನಗರ ಹಾಗೂ ಇಂದಿರಾನಗರದ ನಿವಾಸಿಗಳು ತಮ್ಮ ಚುನಾಹಿತ ಸದಸ್ಯರುಗಳ ವರ್ತನೆಯಿಂದ ಬೇಸತ್ತು ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ವಿಭಿನ್ನವಾಗಿ ಎಚ್ಚರಿಕೆ ನೀಡಿದ್ದಾರೆ ಒಮ್ಮೆ ಈ ಊರಿನ ರಸ್ತೆಯಲ್ಲಿ ಅಪ್ಪಿ ತಪ್ಪಿಯೂ ಯಾರಾದರೂ ಸಂಚರಿಸಿದರೆ ಸಾಕು ಯಮಲೋಕಕ್ಕೆ ಅಹ್ವಾನ ನೀಡಿದಂತೆ ಅಷ್ಟು ಹದಗೆಟ್ಟಿದೆ ಈ ರಸ್ತೆ…

ಸಾವಿರಾರು ಕುಟುಂಬಗಳು ವಾಸಿಸುತ್ತಿರುವ ಈ ಭಾಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಪ್ರಮುಖವಾಗಿ ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಕರೆದೋಯ್ಯಲು ಶಾಲಾ ವಾಹನಗಳು ಇದೆ ರಸ್ತೆಯನ್ನು ಅವಲಂಬಿಸಬೇಕಾಗಿದೆ ಹಲವು ಬಾರಿ ದ್ವಿಚಕ್ರ ವಾಹನದ ಸವರಾರು ಗುಂಡಿ ತಪ್ಪಿಸಲು ಹೋಗಿ ಬಿದ್ದ ಉದಾಹರಣೆ ಸಾಕಷ್ಟು ಕಣ್ಣ ಮುಂದೆ ಸಿಗುತ್ತವೆ ಆದರೆ ಇಲ್ಲಿ ಆಯ್ಕೆ ಅದ ಜನಪ್ರತಿನಿದಿನಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಶಾಂತಿನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮುಖ್ಯವಾಗಿ ಕೂಡಹಳ್ಳಿ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಭಾಗದಲ್ಲಿ ಪದವಿ ಪೂರ್ವ ಕಾಲೇಜು ಅಂಗನವಾಡಿ ಹಾಗೂ ಪ್ರೌಢಶಾಲೆ ಕೂಡ ಈ ಭಾಗದಲ್ಲಿ ಇದೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಈ ಗುಂಡಿ ಬಿದ್ದ ರಸ್ತೆಯನ್ನು ದಾಟಿ ಹಾದು ಹೋಗಬೇಕಿದೆ ಅಂಗನವಾಡಿ ಕೇಂದ್ರ ಸಹ ಈ ಭಾಗದಲ್ಲಿ ಇರುವುದರಿಂದ ಬಾಣಂತಿಯರು ಹಾಗೂ ಸಣ್ಣ ಮಕ್ಕಳು ಬರಲು ತುಂಬಾ ಪ್ರಯಾಸ ಪಡಬೇಕಾಗಿದೆ ಮಳೆಗಾಲ ಬಂತೆಂದರೆ ಸಾಕು ರಸ್ತೆ ತುಂಬೆಲ್ಲಾ ನೀರು ತುಂಬಿ ರಸ್ತೆಯೇ ಕಾಣದೆ ವಾಹನ ಸವರಾರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಈ ಭಾಗದಿಂದ ಚುನಾಹಿತರಾದ ಜನಪ್ರತಿನಿದಿಗಳು ಇಷ್ಟು ದಿವಸಗಳಾದರೂ ದಿವ್ಯಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಇದೆ ಊರಿನ ಶಾಂತಿನಗರದ ನಿವಾಸಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಅನಿಫ್ ರವರು ಮಾತನಾಡಿ ಕಳೆದ 30ವರ್ಷಗಳಿಂದಲೂ ಈ ರಸ್ತೆಯು ಯಾವುದೇ ಕಾಮಗಾರಿ ಕಾಣದೆ ಹಾಗೆ ಉಳಿದಿದೆ ಇದರ ಬಗ್ಗೆ ಹಲವು ಬಾರಿ ಗ್ರಾಮಪಂಚಾಯಿತಿ ಹಾಗೂ ನಮ್ಮ ಭಾಗದ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಕೊಟ್ಟಿದ್ದೇವೆ ಆದರೆ ಭರವಸೆ ಸಿಕ್ಕಿದೆಯೇ ವಿನಃ ಇದುವರೆಗೂ ಯಾವುದೇ ಭರವಸೆ ಇಡೇರಿರುವುದಿಲ್ಲ ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳದೆ ಇದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು ಇಂದಿರಾನಗರ ವಾಸಿ ಹಿರಿಯರಾದ ಹಮಿದ್ ರವರು ಮಾತನಾಡಿ ಚುನಾವಣೆ ಬಂದಾಗ ಮಾತ್ರ ಭರವಸೆ ಕೊಟ್ಟು ಹೋಗುವ ಜನಪ್ರತಿನಿದಿಗಳು ನಂತರದ ದಿನಗಳಲ್ಲಿ ಇತ್ತಕಡೆ ಸುಳಿವೇ ಇರುವುದಿಲ್ಲ ನಾವುಗಳು ಈ ಭಾಗದಲ್ಲಿ ಒಂದೇ ರಾಜಕೀಯ ಪಕ್ಷವನ್ನು ಕಳೆದ 50ವರ್ಷಗಳಿಂದಲೂ ಬೆಂಬಲಿಸುತ್ತ ಬಂದಿದ್ದೇವೆ ಆದರೆ ನಾವು ಬೆಂಬಲಿಸಿ ಆಯ್ಕೆ ಮಾಡಿದ ಜನಪ್ರತಿನಿದಿನಗಳು ನಮ್ಮನ್ನು ಕಡೆಗಣಿಸುತ್ತಾ ಬಂದಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ನಾವುಗಳು ಬದಲಾಗಬೇಕಿದೆ ಹಾಗೆಯೇ ನಮ್ಮ ಕೂಡಹಳ್ಳಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕಿದೆ ಎಂದರು ಮುಂದಿನ ದಿನಗಳಲ್ಲಿ ಜನ ಪರ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮ ಗುರಿ ಆಗಿದೆ ಜನರು ಕಣ್ಣು ಮುಚ್ಚಿ ಜನ ಪ್ರತಿನಿದಿಗಳನ್ನು ಆಯ್ಕೆ ಮಾಡುವುದನ್ನು ಬಿಟ್ಟು ಪ್ರಜ್ಞಾವಂತರನ್ನು ಆಯ್ಕೆ ಮಾಡಬೇಕು ಎಂದರು ನಾವುಗಳು ಬೇಸತ್ತು ಹೋಗಿದ್ದೇವೆ ಇನ್ನೂ ಮುಂದೆಯೂ ಹೀಗೆ ಮುಂದುವರೆದರೆ ಜನ ಜನಪ್ರತಿನಿದಿಗಳ ಮನೆ ಮುಂದೆ ಧರಣಿ ಕೂರೋ ದಿನ ದೂರ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು..

ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಪಷ್ಟನೆ
ಇಂದಿರಾ ನಗರ ರಸ್ತೆ ದುರಸ್ತಿಗೆ ಸರ್ಕಾರದಿಂದ 50 ಲಕ್ಷ ರೂ ಹಣ ಬಿಡುಗಡೆ ಆಗಿದೆ ಕಾಮಗಾರಿ ಪ್ರಾರಂಭ ಗೊಳ್ಳಲು ಮಳೆ ತಡೆಯೊಡ್ಡಿದೆ ಮಳೆಗಾಲವಾಗಿರುವುದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯ ವಾಗಿರುವುದಿಲ್ಲ ಮಳೆಗಾಲದ ನಂತರ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ತಿಳಿಸಿದರು