ಭೂ ಕುಸಿತ ಪ್ರದೇಶ ಚಾರ್ಮಾಡಿ ಘಾಟಿಗೆ ವಿಧಾನ ಪರಿಷತ್ ಉಪಸಭಾಪತಿ ಎಮ್. ಕೆ ಪ್ರಾಣೇಶ್ ಭೇಟಿ

ಚಿಕ್ಕಮಗಳೂರು-
ಕೊಟ್ಟಿಗೆಹಾರ- ಬಣಕಲ್:

ಪ್ರಕೃತಿ ವಿಕೋಪ, ಭೂಕುಸಿತ ಪ್ರದೇಶವಾಗಿದ್ದ ಚಾರ್ಮಾಡಿ ಘಾಟ್ ಗೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮತ್ತು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿ.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಬಾರಿ ಮಳೆ ಸುರಿಯುತ್ತಿದ್ದು , ಕೆಲವು ಕಡೆ ಮಣ್ಣು ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು, ಶಿರಾಡಿ ಘಾಟ್ ನಲ್ಲು ರಸ್ತೆ ಕುಸಿದಿದ್ದ ಕಾರಣ ಎಲ್ಲಾ ವಾಹನಗಳು ಚಾರ್ಮಾಡಿ ಘಾಟ್ ನಲ್ಲಿ ಸಂಚಾರಿಸಲು ಪ್ರಾರಂಭವಾಯ್ತು.
ಚಾರ್ಮಾಡಿ 6ನೇ ತಿರುವುನಲ್ಲಿ ಮಣ್ಣು ಕುಸಿಯುವ ಹಿನ್ನೆಲೆಯಲ್ಲಿ, ಹಾಗೂ ಚಾರ್ಮಾಡಿ ಘಾಟ್ ನ ಒಟ್ಟು ನಾಲಕ್ಕು ತಿರುವುಗಳಲ್ಲಿ ತಡೆಗೋಡೆ ಅಪಾಯದ ಸ್ಥಿತಿಯಲ್ಲಿ ಇರುವುದರಿಂದ
ರಾತ್ರಿ 7 ರಿಂದಾ ಬೆಳೆಗ್ಗೆ 5 ರವರೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಎಲ್ಲಾ ವಾಹನಗಳಿಗೂ ನಿರ್ಬಂಧ ಮಾಡಲಾಯಿತು.

ಸ್ಥಳಕ್ಕೆ ಭೇಟಿನೀಡಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ 9 ಗಂಟೆಯವರೆಗೂ ಲಘುವಾಹನ ಸಂಚರಿಸಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಯಾಣಿಕರಿಗೆ ಸಂಚರಿಸಲು ಅನುಕೂಲವಾಗುವಂತೆ ಇನ್ನೂ ಎರಡು ಮೂರು ದಿನದಲ್ಲಿ ಮಾಡುತ್ತೇವೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಗಡಿ ಭಾಗದವರೆಗೂ ಹೋಗಿ ಸಂಚರಿಸಿ ವೀಕ್ಷಣೆ ಮಾಡಿದರು.

ಶಾಸಕರಾದ ಎಂ.ಪಿ .ಕುಮಾರಸ್ವಾಮಿ ಜಿಲ್ಲಾಡಳಿತ ಜೊತೆ ಮಾತಾಡಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಧರ್ಮಸ್ಥಳ ಕ್ಕೆ ಹೋಗುವ ಪ್ರಯಾಣಿಕರಿಗೆ 9 ಗಂಟೆಯವರೆ ಸಂಚರಿಸಲು ಮಾತಾಡುತ್ತೇನೆ ಎಂದರು

ತಾಲೂಕು ಬಿ.ಜೆ.ಪಿ ಕಾರ್ಯದರ್ಶಿ ಗಜೇಂದ್ರ ಗೌಡ, ಬಿ.ಜಿ.ಪಿ ಮುಖಂಡ ಬಿಎಂ.ಭರತ್, ತಾಲೂಕು ಪಂಚಾಯತ್ ಸದಸ್ಯರು ಕೆ.ಸಿ.ರತನ್, ಸಂಜಯ್ ಗೌಡ, ವಿಕ್ರಂ, ಅಭಿಲಾಷ್, ಪರಕ್ಷಿತ್ ಜಾವಳಿ, ಬಾಳುರು ಮಂಜು, ಉತ್ತಮ್, ಪಂಚಾಕ್ಷರಿ, ಅಶೋಕ್ ಮಲ್ಲಂದುರ್, ಪ್ರದೀಪಗೌಡ, ಅಶ್ವಥ್, ಸತೀಶ್ ಬಾಳುರು, ನರೇಂದ್ರ ಗೌಡ, ಸಂದೀಪ್, ತರುವೆ ಆದರ್ಶ್, ಕುಂಜಿಮೋನು, ಆಜೀದ್, ಮೋಹಿದ್ದೀನ್, ಬಿನು, ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ, ಕಂದಾಯ ಅಧಿಕಾರಿ ಮಂಜುನಾಥ್, ಹಾಗೂ ಕೊಟ್ಟಿಗೆಹಾರ ವರ್ತಕರು ಇದ್ದರು

ವರದಿ ತನು ಕೊಟ್ಟಿಗೆಹಾರ