ಸಾವರ್ಕರ್ ಯುವ ಪ್ರತಿಷ್ಟಾನ ಯುವಕರಿಂದ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ

ಬಣಕಲ್ ಸಾವರ್ಕರ್ ಯುವ ಪ್ರತಿಷ್ಟಾನ ಇವರ ವತಿಯಿಂದ ಇಂದು ಬಣಕಲ್ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು.

ಸ್ಮಶಾನದ ಸುತ್ತ ಮುತ್ತಲ ಪರಿಸರ ಗಿಡ ಗುಂಟೆಗಳಿಂದ ತುಂಬಿ ಹೋಗಿತ್ತು. ಸಾವರ್ಕರ್ ಯುವ ಪ್ರತಿಷ್ಟಾನದ ಯುವಕರು ಇಂದು ರುದ್ರಭೂಮಿಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯಮಾಡಿದರು.

ಸಂಸ್ಕಾರದ ಸಂಧರ್ಭದಲ್ಲಿ ಶವದ ಮೇಲಿದ್ದ ಹೂವು ಇನ್ನಿತರ ವಸ್ತುಗಳನ್ನು ಒಂದೇ ಕಡೆ ಹಾಕದೆ ಅಲ್ಲಲ್ಲಿ ಎಸೆದು ಹೋಗಿದ್ದ ವಸ್ತುಗಳನ್ನು ಹಾಗೂ ರುದ್ರ ಭೂಮಿಯ ಸುತ್ತ ಮುತ್ತಲು ಬೆಳೆದ ಆಳೆತ್ತರದ ಗಿಡಗಂಟಿಗಳನ್ನು ಕತ್ತರಿಸಿ ಒಂದೆಡೆ ಸೇರಿಸಿ ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಿದ್ದಾರೆ.

ವರದಿ ✍️ಸೂರಿ ಬಣಕಲ್