ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕಟ್ಟೆ ಗ್ರಾಮದ ಬಾಳೂರು ಹೋಗುವ ರಸ್ತೆ ಪಕ್ಕದಲ್ಲಿ ಬೃಹತ್ ಗಾತ್ರದ ಕಾಡುಕೋಣ ಕಾಣಿಸಿಕೊಂಡು ವಾಹನ ಸವಾರರಿಗೆ ಗಾಬರಿ ಹುಟ್ಟಿಸಿತ್ತು.
ಮತ್ತಿಕಟ್ಟೆ ಆಟೋ ಚಾಲಕ ರಾಜೇಶ್ ಎಂಬುವಬರು ಮತ್ತಿಕಟ್ಟೆ ಮಾರ್ಗವಾಗಿ ಬಾಳೂರು ಹೋಗುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಇದ್ದ ಕಾಡು ಕೋಣ ಆಟೋವನ್ನು ಕಂಡು ಗಾಬರಿಯಿಂದ ಆಟೋ ಇರುವ ಕಡೆಗೆ ನುಗ್ಗುಲು ಪ್ರಯತ್ನಿಸಿತ್ತು. ತಕ್ಷಣಕ್ಕೆ ಆಟೋವನ್ನು ಹಿಂಬದಿ ಚಲಾಯಿಸಿ ಆಗಬಹುದಾಗಿದ್ದ ಅವಘಡದಿಂದ ಪಾರಾಗಿದ್ದಾರೆ.ವಾಹನ ಸವಾರರನ್ನು ಕಂಡರೂ ಕಾಡುಕೋಣ ಸ್ಥಳದಿಂದ ಕಾಲ್ಕಿತ್ತದೇ ಕೆಲಕಾಲ ಆತಂಕ ಮೂಡಿಸಿತು, ಬಳಿಕ ಕಾಡುಕೋಣ ತೋಟದಲ್ಲಿ ಮರೆಯಾಯಿತು.
ಹಾಡು ಹಗಲೇ ರಸ್ತೆ ಬದಿಯಲ್ಲಿ ಸಂಚರಿಸುವ ಕಾಡುಕೋಣಗಳಿಂದ ಗ್ರಾಮಸ್ಥರು ವಾಹನ ಸವಾರರರು ಆತಂಕ ಪಡುವಂತಾಗಿದೆ.
ವರದಿ ✍️ಸೂರಿ ಬಣಕಲ್