ಮೂಡಿಗೆರೆ ತಾಲ್ಲೂಕಿನ ಹಳೆಮೂಡಿಗೆರೆ ಸಂಜೀವಿನಿ ಗ್ರಾಮಪಂಚಾಯ್ತಿ ಮಟ್ಟದ ಒಕ್ಕೂಟದ ವತಿಯಿಂದ 2024-25ನೇ ಸಾಲಿನ ಎರಡನೇ ಮಾಸಿಕ ಸಂತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಪುಟ್ಟಮ್ಮ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.
ಶ್ರೀಮತಿ ಮೋಟಮ್ಮ ಮಾಜಿ ಸಂಸದರು ಮಾತಾನಾಡಿ ಮಹಿಳೆಯರು ಸ್ವಾವಲಂಭಿಯಾಗಿ ಜೀವನ ಸಾಗಿಸಲು ಮತ್ತು ಮುಂದೆ ಬರಲು ಅವರು ಉತ್ಪದಿಸಿದ ಉತ್ಪನ್ನ ಗಳಿಗೆ ಮಾರುಕಟ್ಟೆ ಕಲ್ಪಿಸಲು ಮಾಸಿಕ ಸಂತೆ ಮುಖ್ಯ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯನ್ನಾಡಿದ ಅಬ್ದು ಲ್ ನಾಜಿಮ್ ವಲಯ ಮೇಲ್ವಿಚಾರಕರು ಮಾಸಿಕ ಸಂತೆಯ ಉದ್ದೇಶ ಬಗ್ಗೆ ತಿಳಿಸಿದರು. ಪಟ್ಟಣ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಗೀತಾ ರಂಜನ್ ಅಜಿತ್ ಕುಮಾರ್ ರವರು ಮಾತನಾಡಿ ಸಂಜೀವಿ ಯೋಜನೆ ತುಂಬಾ ಅನುಕೂಲ ವಾಗಿದೆ ಎಂದು ತಿಳಿಸಿದರು…ಗ್ರಾಮ ಪಂಚಾಯ್ತಿ ಯ ಅಧ್ಯಕ್ಷರು ಕುಮಾರಿ ರಂಜಿತಾ ರವರು ಸ್ಟಾಲ್ ಹಾಕಲು ಬಂದ ಎಲ್ಲರಿಗೂ ಶುಭ ಹಾರೈಸಿದರುಸಂಜೀವಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಕಲ್ಪನಾ ಅವರು ಮಾತನಾಡಿ ಸ್ಟಾಲ್ ಹಾಕಲು ಬಂದವರಿಗೆ ಶುಭ ಹಾರೈಸಿದರು.
ತಾಲ್ಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಚಂದ್ರಾವತಿ ಯವರು ಮಾತನಾಡಿ ಸ್ಟಾಲ್ ಹಾಕಲು ಬಂದ ಎಲ್ಲಾ ಮಹಿಳೆಯರಿಗೆ ಶುಭ ಹಾರೈಸಿದರು ತಾಲ್ಲೂಕು ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಸರೋಜಾ ರವರು ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು,,
ಈ ಸಂದರ್ಭದಲ್ಲಿ ಚಂದನ್ ಗ್ರೂಪ್ಸ್ ,ಮಾಲಿಕರು ಶ್ರೀಮಂಜೇಗೌಡ ಹಾಗು ಒಕ್ಕೂಟದ ಒಕ್ಕೂಟದ ಪದಾಧಿಕಾರಿಗಳು, ಚೈತ್ರಾ ವಲಯ ಮೇಲ್ವಿಚಾಕರು (ಕೌಶಲ್ಯ) ಅಭಿಜಿತ್ ವಲಯ ಮೇಲ್ವಿಚಾಕರು,ತಾಲ್ಲೂಕು ಎಂ ಐ ಎಸ್ ಸಂಯೋಜಕರು ರಶ್ಮಿತಾ ಬಿ ಆರ್. ಪಿ. ಇ. ಪಿ. ಪ್ರೀತಿ ಹಾಗೆ ಎಂ. ಬಿ. ಕೆ,ಎಲ್. ಸಿ. ಆರ್. ಪಿ,ಕೃಷಿ ಸಖಿ ,ಪಶು ಸಖಿ ಹಾಗು ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.