ಶ್ರೀ ದೇವಿ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಬಣಕಲ್ ಮತ್ತು ಸಾವರ್ಕರ್ ಯುವ ಪ್ರತಿಷ್ಠಾನ (ರಿ ) ಸುಭಾಷ್ ನಗರ ಬಣಕಲ್ ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು.
ದಸರೆಯ ಸೊಬಗಿಗೆ ಸಂಭ್ರಮದ ರಂಗು ತುಂಬಿದ ಬಣಕಲ್ ಶ್ರೀ ಶಾರದಾ ಮಹೋತ್ಸವದ ಕೊನೆಯ ದಿನವಾದ ಶನಿವಾರ ರಾತ್ರಿ ಬಣಕಲ್ ರಾಜಬೀದಿಯಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು.
ಬೆಳಕಿನ ವೈಭವದಲ್ಲಿ ಹಗಲಿನಂತೆ ಶೋಭಿಸಿದ ಬೀದಿಗಳಲ್ಲಿ ನಡೆದ ಮೆರವಣಿಗೆಗೆ ಭಕ್ತರು ಸಾಕ್ಷಿಯಾದರು ಸರ್ವಾಭರಣಭೂಷಿತೆಯಾದ ಮತ್ತು ವೀಣೆಯನ್ನು ಕೈಯಲ್ಲಿ ಹಿಡಿದಿರುವ ಶಾರದಾ ಮಾತಾ, ಅಂಬಾ ಭವಾನಿಗೆ ಭಕ್ತರಿಂದ ಜಯಘೋಷ ಮೊಳಗಿತು.
ವಾದ್ಯಘೋಷಗಳ ಹಿಮ್ಮೇಳ ದೊಂದಿಗೆ ಮಹಮ್ಮಾಯಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಸಂಜೆ 6ಗಂಟೆಗೆ ಸಾಗಿತ್ತು. ಮೆರವಣಿಗೆಲ್ಲಿ ಚೆಂಡೆ ಸದ್ದು ಪ್ರಮುಖ ಆಕರ್ಷಣೆ ಆಗಿತ್ತು. ಚಂಡೆ ಸದ್ದು ಭಕ್ತರನ್ನು ಭಕ್ತಿಯಲ್ಲಿ ತೇಲಾಡುವಂತೆ ಮಾಡಿತ್ತು. ರಾಮನ ಸ್ತಬ್ದ ಚಿತ್ರ, ಭಜನೆ ಕುಣಿತ, ಹೀಗೆ ಹಲವಾರು ಕಾರ್ಯಕ್ರಮಗಳು ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಸ್ತ್ರೀಯರು ಪುರುಷರು ಸಾಂಪ್ರದಾಯಿಕ ಉಡುಗೆ ಧರಿಸಿ ಗಮನ ಸೆಳೆದರು. ನಂತರ ಅಲಂಕಾರಗೊಂಡ ಶಾರದೆ ವಿಗ್ರಹವನ್ನು ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ವರದಿ ✍️ಸೂರಿ ಬಣಕಲ್ .