ಬಣಕಲ್: ಬ್ರಹ್ಮಶ್ರೀನಾರಾಯಣಗುರು ಸಮಾಜ ಸೇವಾ ಸಂಘ (ರಿ )ಬಣಕಲ್ ಇವರ ವತಿಯಿಂದ ಸೋಮವಾರ ಬಣಕಲ್ ಸುಭಾಷ್ ನಗರದ ಸಮುದಾಯ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೆ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಜೊತೆ ಸನ್ಮಾನಿಸಲಾಯಿತು ಹಾಗೂ ಬಣಕಲ್ ಘಟಕದ ನೂತನ ಅಧ್ಯಕ್ಷರಾಗಿ ಸುಜಯ್ ಪೂಜಾರಿ ಸುಭಾಷ್ ನಗರ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲೂಕು ಅಧ್ಯಕ್ಷರಾದ ಮನೋಜ್ ಕುಮಾರ್, ಗೌರವಾಧ್ಯಕ್ಷರು ಸುರೇಶ್ ಪೂಜಾರಿ, ಬಣಕಲ್ ಘಟಕದ ಅಧ್ಯಕ್ಷರು ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷರು ಹರೀಶ್ ಪೂಜಾರಿ, ಪ್ರಭಾಕರ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಸಹ ಕಾರ್ಯದರ್ಶಿ ರೇವತಿ, ಸಂಘಟನಾ ಕಾರ್ಯದರ್ಶಿ ಅರುಣ್ ಪೂಜಾರಿ ಬಣಕಲ್, ಸಂಘಟನಾ ಸಹಕಾರ್ಯದರ್ಶಿ ರಮೇಶ್ ಪೂಜಾರಿ ಇದ್ದರು.ವರದಿ :✍️ಸೂರಿ ಬಣಕಲ್