ಬಣಕಲ್ : ಬಣಕಲ್ ಸುರಕ್ಷಾ ವೈನ್ಸ್ ಮುಂಭಾಗ ಹಣದ ವಿಚಾರವಾಗಿ ಮೂವರು ಸೇರಿ ಓರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಣಕಲ್ ನಲ್ಲಿ ನಡೆದಿದೆ.
ಬಣಕಲ್ ಸುರಕ್ಷಾ ವೈನ್ ಮುಂಭಾಗ ದೂರದಾರ ಸಚಿನ್ ಹಾಗೂ ಆರೋಪಿಗಳ ನಡುವೆ ಹಣದ ವಿಚಾರವಾಗಿ ಮಾತುಕತೆ ನಡೆದಿದೆ. ಮಾತಿಗೆ ಮಾತು ಬೆಳೆದು ಆರೋಪಿಗಳಾದ ಕೂಡಹಳ್ಳಿ ಸಮಂತ್, ಬಾಳೂರು ಶರತ್ ಕೂಡಹಳ್ಳಿ ಸತೀಶ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಸಚಿನ್ ರವರು ಬಣಕಲ್ ಠಾಣೆಯಲ್ಲಿ ದೂರುನೀಡಿದ್ದಾರೆ.
ಹೆಲ್ಮೆಟ್, ಇಂಟರ್ ಲಾಕ್ ಹಾಗೂ ಕಲ್ಲಿನಿಂದ ತನ್ನ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಪಿ ಎಸ್ ಐ ರೇಣುಕಾ ಹಾಗೂ ಸಿಬ್ಬಂದಿ ವರ್ಗ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ.