ವಾಸ್ತವ ಸ್ಥಿತಿ ಅರಿಯದೆ ಹೋಂ ಸ್ಟೇ ಗಳ ಮೇಲೆ ಗೂಬೆಕೂರಿಸುವುದು ಸರಿಯಲ್ಲ

ಮಳೆ ಬಂದರೆ ಗುಡ್ಡ ಕುಸಿದರೆ ಅದಕ್ಕೆಲ್ಲ ಕಾರಣ ಹೋಂ ಸ್ಟೇ ಇದು ಪ್ರತಿ ಬಾರಿಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ.

100 ವರುಷಗಳ ಹಿಂದೆ ಭೂ ಕುಸಿತ ಸಂಭವಿಸಿಲ್ಲವೇ. ಅಂದು ಹೊಂಸ್ಟೇಗಳಿತ್ತೆ. ಪ್ರಕೃತಿಯಲ್ಲಿ, ಮಳೆಗಾಲ, ಬರಗಾಲ, ಭೂ ಕುಸೂತಿಗಳು ಪ್ರಕೃತಿದತ್ತವಾಗಿ ನಡೆದುಕೊಂಡು ಬಂದಿವೆ.ಅವಜ್ಞಾನಿಕವಾಗಿ ನಡೆಸುವ ಕಾಮಗರಿಗಳನ್ನು ಮೊದಲು ನಿಲ್ಲಿಸಿ ಎಂಬುದು ಮಲೆನಾಡಿಗರ ಪ್ರಶ್ನೆ.

ನೂರಾರು ವರುಷಗಳಿಂಧ ಸಾವಿರಾರು ಕುಟುಂಬಗಳು ಮಲೆನಾಡಿನಲ್ಲಿ ವಾಸಿಸುತಿವೆ, ಮಲೆನಾಡಿನ ಜನರಿಂದ ಎಂದೂ ಪ್ರಕೃತಿಗೆ ತೊಂದರೆಯಾಗಿಲ್ಲ, ಮಲೆನಾಡು ಭಾಗಗಳ ಮೂಲಕ ಗುಡ್ಡ ಕೊರೆದು ಕರೆಂಟ್ ಲೈನ್ ಮತ್ತು ಡೀಸೆಲ್ ಪೈಪ್ ಲೈನ್, ಹೆವಿ ಟ್ರಾನ್ಸ್ಪೋರ್ಟ್ ವೆಹಿಕಲ್ ಸಾಗಟ ಇವೆಲ್ಲ, ಅಭಿವೃದ್ಧಿಯಾಗಿ ಕಾಣುತವೇ..ಆದರೆ ನೂರಾರು ವರುಷದಿಂದ ವಾಸವಿರುವ ಮಲೆನಾಡಿಗರು ಜಿವೋನೋಪಾಯಕೆ ನಡೆಸುವ ಹೊಂಸ್ಟೇ, ಒತುವರಿ ಕೃಷಿ, ಮಾರಕವಾಗಿ ಕಾಣುತದೆಯೇ..ಎಂಬುದು ಪ್ರಶ್ನೆ.

ವರದಿ :✍️ಸೂರಿ ಬಣಕಲ್