ಪುಂಡರ ಪುಂಗಿ ಬಂದ್ ಮಾಡುತ್ತಿರುವ ಬಣಕಲ್ ಪಿ.ಎಸ್.ಐ ರೇಣುಕಾ

ಬಣಕಲ್ :ಕೆಲವು ದಿನಗಳಿಂದ ಹೊರ ಊರುಗಳಿಂದ ಬರುವ ಪ್ರವಾಸಿಗರು ಬಣಕಲ್ ಠಾಣಾ ವ್ಯಾಪ್ತಿಯ ದೇವರಮನೆ. ಚಾರ್ಮಾಡಿ ಪ್ರವಾಸಿ ಸ್ಥಳದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ ಎಂಬ ದೂರುಗಳು ದಿನ ನಿತ್ಯ ಕೇಳಿ ಬರುತ್ತಿತ್ತು. ಈಗ ಅಂತಃ ಪುಂಡರಿಗೆ ಬಣಕಲ್ ಠಾಣಾ ಪಿ ಎಸ್ ಐ ರೇಣುಕಾರವರು ಬ್ರೇಕ್ ಹಾಕುತ್ತಿದ್ದಾರೆ. ಅಂತವರ ಮೇಲೆ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುತ್ತಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿತ್ತಿದ್ದಾರೆ ಅದೆ ರೀತಿ ನಿನ್ನೆ ಶನಿವಾರ 13-07-2024 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಹಾರದ ಸಾರ್ವಜನಿಕ ಸ್ಥಳದಲ್ಲಿ ಬೆಂಗಳೂರು ಮೂಲದ ವಾಸಿಗಳಾದ ವಿಜಯ್ ವಿಜಿ, ಸತ್ಯ, ಶಿವು,ಪುನೀತ್ ಕುಮಾರ್ ಪುನಿರವರು ಮದ್ಯಪಾನ ಮಾಡಿ ಗಲಾಟೆ ಮಾಡಿಕೊಂಡು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಬೀದಿಜಗಳ ಮಾಡಿಕೊಂಡು ಸಾರ್ವಜನಿಕರ ಶಾಂತಿಯನ್ನು ಕದಡಿರುತ್ತಾರೆ ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಮೊ ನಂ: 47/2024 ಕಲಂ: 194 ಭಾರತಿಯ ನ್ಯಾಯ ಸಂಹಿತೆ-2023 ರ ರಿತ್ಯಾ ಪ್ರಕರಣ ದಾಖಲಿಸಿರುತ್ತಾರೆ. KA40M5798 ಹುಂಡೈ I20 ಕಾರಿನ ಚಾಲಕ ಪುನೀತ್ ಗೌಡ ಬೆಂಗಳೂರು ವಾಸಿ ಮದ್ಯಪಾನ ಮಾಡಿ ಕಾರನ್ನು ಚಾಲನೆ ಮಾಡಿದ ಮೇರೆಗೆ ಆತನ ವಿರುದ್ದ ಕಲಂ: 185 ಐ.ಎಂ.ವಿ ಕಾಯ್ದೆ ರಿತ್ಯಾ ಪ್ರಕರಣ ದಾಖಲು ಮಾಡಿರುತ್ತಾರೆ.