ಕಪುಚಿನ್ ಕೃಷಿಕ ಸೇವಾಕೇಂದ್ರ (ರಿ)ವಿಮುಕ್ತಿ ಚಾರಿಟೇಬಲ್ (ರಿ)ಟ್ರಸ್ಟ್ ವತಿಯಿಂದ 16-06-2024ರಂದು ಬಣಕಲ್ ಚರ್ಚ್ ಹಾಲ್, ನಲ್ಲಿ ಬಡಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಫಾ. ಲ್ಯಾನ್ಸಿ ಲೋಬೋ, ಧರ್ಮಗುರುಗಳು, ಬಣಕಲ್ ಚರ್ಚ್ ಫಾ. ಜೋಯೆಲ್ ಲೋಪೆಜ್, ದಯಾಳ್ ಭಾಗ್ ಆಶ್ರಮ, ಉಜಿರೆ • ಫಾ. ಎಡ್ವಿನ್ ಡಿಸೋಜ, ನಿರ್ದೇಶಕರು, ವಿಮುಕ್ತಿ ಸಂಸ್ಥೆ• ಶ್ರೀಯುತ ನವೀನ್ ಕುಮಾರ್ ಮೂಡಿಗೆರೆ, ಶ್ರಿಯುತ ನವೀನ್ ಎಸ್., ಬಣಕಲ್ ಕ್ರೈಸ್ತ ಅಭಿವೃಧ್ಧಿ ಸಂಘ• ಕುಮಾರಿ ರಚನಾ ಈ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಲಾಯಿತು• ಮಕ್ಕಳಿಗೆ ವಿದ್ಯೆಯನ್ನು ಪಡೆಯಲು ಸಿಕ್ಕಿದಂತಹ ಅವಕಾಶ, ಸಹಾಯ ಎಲ್ಲವನ್ನು ಬಳಸಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಆಗ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಿದ ಸಂಸ್ಥೆಗೆ, ಹೆತ್ತವರಿಗೆ ತೃಪ್ತಿ ಎಂದು ಹರಿದುಂಬಿಸಲಾಯಿತು• ವಿದ್ಯಾಬ್ಯಾಸಕ್ಕೆ ಸಹಾಯ ಪಡೆದರೆ ಸಾಕಾಗಲ್ಲ ಬದಲಾಗಿ ಸಹಾಯ ಮಾಡಿದವರನ್ನು ಸದಾ ನೆನೆದು ಕೃತಜ್ಞತೆ ಸಲ್ಲಿಸಿ ಮುಂದೆ ಅವಕಾಶ ಸಿಕ್ಕಿದಾಗ ಇತರರಿಗೆ ಸಹಾಯ ಮಾಡಬೇಕು, ಮಕ್ಕಳಾಗಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಶ್ರಮಪಟ್ಟು, ಕಷ್ಟಪಟ್ಟು ಶೃದ್ದೆಯಿಂದ ಮಾಡಿದಲ್ಲಿ ಮಾತ್ರ ಯಶಸ್ಸು ಸಿಗುತ್ತದೆ ಎಂದು ತಿಳಿಸಲಾಯಿತು•
ಅತಿಥಿಗಳು ಮಕ್ಕಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರುಕಾಯ೯ಕ್ರಮದ ಪಲಿತಾಂಶ: • 100 ಬಡ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಸಹಾಯಾರ್ಥ ಬ್ಯಾಗ್ ಹಾಗೂ ಕಲಿಕಾ ಸಾಮಾಗ್ರಿಗಳನ್ನು ನೀಡಲಾಯಿತು.• ಮಕ್ಕಳು ಹೆತ್ತವರು ಸೇರಿ 142 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು