ಬಣಕಲ್ :ಕಲ್ಯಾಣಮಂಟಪ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸಮುದಾಯ ಭವನ ನಿರ್ಮಿಸಿ ಪ್ರಚಾರ ಪಡೆಯುವ ಜನಗಳ ನಡುವೆ ಏನು ಅಪೇಕ್ಷೆ ಪಡೆಯದೇ ತಾನು ಹುಟ್ಟಿ ಬೆಳೆದ ಗ್ರಾಮಕ್ಕೆ ತನ್ನಿಂದ ಏನಾದರೂ ಸಣ್ಣ ಕೊಡುಗೆ ನೀಡಬೇಕು ಎಂದು ನಿರ್ಧರಿಸಿ ತಂದೆ ಮಂಜೇಗೌಡರ ಸ್ಮರಣಾರ್ಥ ಉರಿಗೊಂದು ಸಮುದಾಯದ ಭವನ ಕಟ್ಟಿಸಿಕೊಟ್ಟ ಪುಣ್ಯಾತ್ಮ ಹೆಗ್ಗುಡ್ಲು ಗ್ರಾಮದ ಕಾಫಿ ಬೆಳೆಗಾರರಾದ ಸುಧೀರ್ ಗೌಡರು.
ಇದರ ಬಗ್ಗೆ ಗ್ರಾಮಸ್ಥ ಕಿರಣ್ ರಾಜ್ ರವರು ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿ ಹೆಗ್ಗುಡ್ಲು, ಬಸನಿ ಗ್ರಾಮದಲ್ಲಿ ದಶಕಗಳಿಂದ ಯಾವುದೇ ಪೂಜಾಕಾರ್ಯ ಹಾಗೂ ಸಭೆ ಸಮಾರಂಭಗಳನ್ನು ನಡೆಸಬೇಕೆಂದರೂ ಖಾಸಗಿ ಸ್ಥಳ ಅಥವಾ ಸರ್ಕಾರಿ ಶಾಲೆಗಳನ್ನು ಅವಲಂಬಿಸಬೇಕಿತ್ತು. ಗ್ರಾಮಸ್ಥರೆಲ್ಲ ಸೇರಿಕೊಂಡು ಸುಧೀರ್ ಗೌಡರ ಬಳಿ ಸಮುದಾಯ ಭವನದ ಬೇಡಿಕೆ ಇಟ್ಟಾಗ ಸಂತೋಷದಿಂದಲೇ ಒಪ್ಪಿಕೊಂಡು ತಮ್ಮ ಸ್ವಂತ ಖರ್ಚಿನಿಂದಲೇ ತಂದೆಯ ಸ್ಮರಣಾರ್ಥ ಸಮುದಾಯ ಭವನ ಕಟ್ಟಿಸಿಕೊಟ್ಟು ಗ್ರಾಮಸ್ಥರ ಬಹುದಿನದ ಆಶಯವನ್ನು ನೆರವೇರಿಸಿದರು ಎಂದು ಸಂತಸ ಹಂಚಿಕೊಂಡರು. ಅವರ ಹೃದಯ ಶ್ರೀಮಂತಿಕೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ :✍️ಸೂರಿ ಬಣಕಲ್