ದತ್ತ ಜಯಂತಿ ಹಿನ್ನಲೆ ಬಣಕಲ್ ಸಂಪೂರ್ಣ ಬಂದ್ ಯಶಸ್ವಿ

ಬಣಕಲ್ : ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ದತ್ತ ಜಯಂತಿ ಹಿನ್ನಲೆಯಲ್ಲಿ ಮಂಗಳವಾರ ಬಣಕಲ್, ಕೊಟ್ಟಿಗೇಹಾರ ಸೇರಿದಂತೆ ಮುಖ್ಯ ರಸ್ತೆಯ ಬಗ್ಗಸಗೋಡು,ಚಕ್ಕಮಕ್ಕಿ, ಸಬ್ಬೇನಹಳ್ಳಿ, ಹೊರಟ್ಟಿ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್ ಆಗಿದ್ದವು.ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಮೆಡಿಕಲ್ , ಪೆಟ್ರೋಲ್ ಬಂಕ್, ಪತ್ರಿಕೆಗಳು,ಹಾಲು ಸರಬರಾಜು ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್ ಆಗಿ ಬಣಕಲ್ ಸುತ್ತಮುತ್ತ ಸಂಪೂರ್ಣ ಬಂದ್ ಯಶಸ್ವಿಯಾಗಿದೆ. ಬಣಕಲ್ ಪಿ.ಎಸ್.ಐ. ರೇಣುಕಾ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಮೀಸಲು ಪಡೆಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರು. ಸಂಜೆವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ಇಲ್ಲದೆ ಶಾಂತ ರೀತಿಯಲ್ಲಿ ಬಂದ್ ಯಶಸ್ವಿಯಾಯಿತು.

ವರದಿ :✍️ಸೂರಿ ಬಣಕಲ್