ಚಿಕ್ಕಮಗಳೂರಿನ ದತ್ತಾತ್ರೇಯ ದತ್ತ ಜಯಂತಿ ಮಂಗಳವಾರ ನಡೆಯಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೊಟ್ಟಿಗೆಹಾರ ಮುಖ್ಯ ರಸ್ತೆಯಿಂದಾ ಬಣಕಲ್, ಚಕಮಕ್ಕಿ, ಬಗ್ಗಸ ಗೋಡ್, ಸಬ್ಬೆನಹಳ್ಳಿ, ಹೊರಟ್ಟಿ ಮುಂತಾದ ಭಾಗದಲ್ಲಿ ಪೆಟ್ರೋಲ್ ಬಂಕ್, ಮೆಡಿಕಲ್, ಹಾಲು,ಸರಬರಾಜು ಹೊರತು ಪಡಿಸಿ ಉಳಿದಾ ಎಲ್ಲಾ ಅಂಗಡಿ ಮುಂಗಟ್ಟುಗಳು ಮಂಗಳವಾರ ಬೆಳಿಗ್ಗೆಯಿಂದಲೇ ಸಂಪೂರ್ಣ ಬಂದ್ ಮಾಡಲು ಬಣಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಡಿ.ವಿ. ರೇಣುಕಾ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಇನ್ನೂರಕ್ಕಿಂತಾ ಹೆಚ್ಚು ವಾಹನಗಳು ಸಾಗಲಿದ್ದು ಸಾವಿರಾರು ಭಕ್ತರು ದತ್ತ ಪೀಠಕ್ಕೆ ತೆರಳಲಿದ್ದಾರೆ. ಮುಂಜಾಗ್ರತೆಯಾಗಿ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಪ್ರತಿಯೊಂದು ವಾಹನಗಳ ತಪಾಸಣೆ ಮಾಡಲಾಗುತಿದ್ದು , ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಕೊಟ್ಟಿಗೆಹಾರ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸರ್ಪ ಗಾವಲಾಗಿ ಬೀದರ್ ಸಬ್ ಇನ್ಸ್ಪೆಕ್ಟರ್ ಅಮರ್, ಎ. ಎಸ್.ಐ.ಶಶಿ, ವಿಶೇಷ ಕಾರ್ಯ ನಿರ್ವಹಣ ದಂಡಾಧಿಕಾರಿ ಕೃಷ್ಣ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಪೊಲೀಸ್ ಸಿಬ್ಬಂದಿಗಳಾದ ನವೀನ್, ಅಜಯ್,ಪಾರಗೊಂಡ, ಅರಣ್ಯ ಗಸ್ತು ಅಧಿಕಾರಿ ವಿಜಯ್, ಪರಮೇಶ್, ಹೋಮ್ ಗಾರ್ಡ್ ಶುಭ, ಮುಂತಾದವರು ಇದ್ದರು.