ಬಣಕಲ್ ನಲ್ಲಿ ರಾಜಾರೋಷವಾಗಿ ನಡೆ ಯುತ್ತಿದೆ ದನ ಕಳ್ಳತನ:ಬೀದಿ ಬದಿಯಲ್ಲಿ ಮಲಗಿದ್ದ ದನಗಳೇ ಇವರಿಗೆ ಟಾರ್ಗೆಟ್

ಬಣಕಲ್: ಮತ್ತೊಮ್ಮೆ ಬಣಕಲ್ ನಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ, ರಾತ್ರಿ ರಸ್ತೆ ಬದಿ ಮಲಗುವ ದನಗಳೆ ಇವರಿಗೆ ಟಾರ್ಗೆಟ್ ಇವರ ಕಾರ್ಯಾಚರಣೆ ಪ್ರಾರಂಭವಾಗುವುದೇ ಮುಂಜಾನೆ 4ಗಂಟೆ ಸಮಯದಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿ ಇದ್ದಾಗ ಇವರು ತಮ್ಮ ಕೆಲಸ ಪ್ರಾರಂಭ ಮಾಡುತ್ತಾರೆ. ಇವರಿಗೆ ಯಾರ ಭಯವು ಇಲ್ಲ ಎಂಬುದು ನಿನ್ನೆ ನಡೆದ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಮುಂಜಾನೆ ಬಣಕಲ್ ಶಾಂತಿ ನಗರದ ಕೃಷ್ಣ ಆಸ್ಪತ್ರೆ ಸಮೀಪ ಸುರೇಶ್ ಎಂಬುವವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಪ್ರತಿ ದಿನ ನಾಲ್ಕೈದು ದನಗಳು ಮಲಗಿರುತ್ತದೆ, ಎಂದಿನಂತೆ ನಿನ್ನೆಯೂ ಸಹ ಮಲಗಿತ್ತು ಇದನ್ನು ಗಮನಿಸಿದ ದುಷ್ಕರ್ಮಿಗಳು ಮಲಗಿದ್ದ ದನಗಳನ್ನು ಹಿಡಿದು ತಾವು ತಂದಿದ್ದ ರಿಡ್ಜ್ ಕಾರಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು, ದನದ ಚಿರಾಟದ ಸದ್ದನ್ನು ಕೇಳಿ ತಕ್ಷಣವೇ ಸುರೇಶ್ ಎಂಬುವವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅವರು ನಾಲ್ಕೈದು ಜನರಿದ್ದ ಕಾರಣ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು ಅದರಿಂದ ಅವರನ್ನು ಹಿಡಿಯಲು ಹಾಗೂ ದನದ ರಕ್ಷಣೆ ಮಾಡಲು ಅಕ್ಕ ಪಕ್ಕದ ಮನೆ ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಜನರು ಬರುವುದನ್ನು ಗಮನಿಸಿದ ದುಷ್ಕರ್ಮಿಗಳು ಮಚ್ಚನ್ನು ತೋರಿಸಿ ಮುಖ ಮುಚ್ಚಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಈ ಘಟನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವರದಿ :ಸೂರಿ ಬಣಕಲ್