ಹೆಗ್ಗುಡ್ಲು :ಹೊಸ ಬಿ.ಎಸ್. ಎನ್.ಎಲ್. ಟವರ್ ಗೆ ಗ್ರಾಮಸ್ಥರಿಂದ ಗುದ್ದಲಿ ಪೂಜೆ

ಬಣಕಲ್ :ಹೆಗ್ಗುಡ್ಲು ಗ್ರಾಮದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ.

ಬುಧವಾರ ಹೆಗ್ಗುಡ್ಲು ಗ್ರಾಮಸ್ಥರು ಹಾಗೂ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಬಿಎಸ್ಎನ್ಎಲ್ ಟವರ್ ನ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ಜೇಸಿಬಿ ಕಾಮಗಾರಿ ಪ್ರಾರಂಭಗೊಂಡ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಹೆಗ್ಗುಡ್ಲು ಗ್ರಾಮಸ್ಥರಾದ ಕಿರಣ್ ರಾಜ್ ಹಾಗೂ ಮಣಿಕಂಠ ಹೆಗ್ಗುಡ್ಲು ಹಾಗೂ ಬಸನಿ ಗ್ರಾಮದ ಜನತೆಗೆ ನೆಟ್ವರ್ಕ್ ಸಮಸ್ಯೆ ದೊಡ್ಡ ತಲೆನೋವಾಗಿತ್ತು ನೆಟ್ವರ್ಕ್ ಸಿಗಬೇಕೆಂದರೆ ಕಿಲೋಮೀಟರ್ ಗಟ್ಟಲೆ ದೂರ ನಡೆದು ನೆಟ್ವರ್ಕ್ ಹುಡುಕುವ ಪ್ರಮೇಯ ಇದೆ, ಕಾಡು ಪ್ರದೇಶ ಆಗಿರುವುದರಿಂದ ಕಾಡು ಪ್ರಾಣಿಗಳ ಕಾಟ ಈ ಪ್ರದೇಶದಲ್ಲಿ ಪ್ರತಿ ನಿತ್ಯ ಕಾಣುತ್ತೆವೆ. ಇದರ ಬಗ್ಗೆ ಮಾಹಿತಿ ಕೊಡೋಣ ಎಂದರೆ ನೆಟ್ವರ್ಕ್ ಸಮಸ್ಯೆ, ತುರ್ತು ಸಂದರ್ಭದಲ್ಲಿ ಕರೆ ಸಿಗದೇ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿದ್ದರು. ಗ್ರಾಮದ ಜನತೆ ಪಡುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೆವು ಅದಕ್ಕೆ ಈಗ ಸ್ಪಂದನೆ ದೊರಕಿರುವುದು ಗ್ರಾಮಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು. ಸಮಸ್ಯೆಗೆ ಸ್ಪಂದಿಸಿ ಕಾಮಗಾರಿ ಆರಂಭಿಸಿರುವದಕ್ಕೆ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅಭಾರಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ತಾರಾನಾಥ್ , ಸುಂದ್ರೇಶ್. ನಾಗರಾಜ್ ರವೀಂದ್ರ. ಮಣಿಕಂಠ. ಮನು ಮತ್ತು ಅಧಿಕಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ವರದಿ :✍️ಸೂರಿ ಬಣಕಲ್