ಜೀವನ್ಮರಣ ಹೋರಾಟದಲ್ಲಿದ್ದ ಬಿಡಾಡಿ ದನದ ರಕ್ಷಣೆ ಮಾಡಿದ ಮೂಡಿಗೆರೆಯ ವಿ.ಎಚ್.ಪಿ ಭಜರಂಗದಳ ಕಾರ್ಯಕರ್ತರು

ಬಣಕಲ್ :ಎರಡು ದಿನಗಳ ಹಿಂದೆ ಮೂಡಿಗೆರೆ ಪಟ್ಟಣದಲ್ಲಿ ಬಿಡಾಡಿ ದನವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಾಯಗೊಂಡಿತ್ತು.ಅದರ ಆರೋಗ್ಯ ಹದಗೆಟ್ಟಿರುವುದನ್ನು ಅರಿತ ಮೂಡಿಗೆರೆಯ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಅದರ ರಕ್ಷಣೆಗೆ ಮುಂದಾಗಿ, 2ದಿನಗಳ ಕಾಲ ಸೂಕ್ತ ಚಿಕಿತ್ಸೆ ಕೊಡಿಸಿ ಚಿಕ್ಕಮಗಳೂರಿನ ಗೋಶಾಲೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

✍️ವರದಿ :ಸೂರಿ ಬಣಕಲ್