ಸಹಕಾರ ರತ್ನ”ಪ್ರಶಸ್ತಿ ಪುರಸ್ಕೃತ ಓ.ಎಸ್. ಗೋಪಾಲಗೌಡರಿಗೆ ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ

ಬಣಕಲ್ :ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಓ.ಎಸ್.ಗೋಪಾಲ ಗೌಡ ಅವರನ್ನು ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯರುಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ನವಂಬರ್ 20ರಂದು ವಿಜಯಪುರದಲ್ಲಿ ನಡೆದ 70ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹದಲ್ಲಿ ಓ.ಎಸ್. ಗೋಪಾಲಗೌಡರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು. ರಾಜ್ಯದ ಹಿರಿಯ ಸಹಕಾರಿಗಳಲ್ಲಿ ಒಬ್ಬರಾಗಿರುವ ಓ.ಎಸ್. ಗೋಪಾಲ ಗೌಡರು ಕಳೆದ ಆರು ದಶಕಳಿಂದ ಸಹಕಾರಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಅವರು ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಔಸನ ಗ್ರಾಮದವರಾದ ಗೋಪಾಲಗೌಡರು ಪ್ರಸ್ತುತ ತಾಲ್ಲೂಕ್ಕಿನ ಪಲ್ಗುಣಿ ಗ್ರಾಮದಲ್ಲಿ ನೆಲೆಸಿದ್ದಾರೆ.

ಈ ಸಂದರ್ಭದಲ್ಲಿ ಬಿ.ಹೊಸಹಳ್ಳಿ ಕೃಷಿ ಪತ್ತಿನ ಬಿ.ಎಸ್.ರಕ್ಷಿತ್ ಬಡವನದಿಣ್ಣೆ ಅಧ್ಯಕ್ಷರು. ಪ್ರಸನ್ನ ಎಚ್ ಟಿ ಉಪಾಧ್ಯಕ್ಷರು. ನಿರ್ದೇಶಕರುಗಳು ರಮೇಶ್ ಬಾನಹಳ್ಳಿ. ಗೋಪಾಲ್ ಗೌಡ್ರು. ಓ ಜಿ ರವಿ. ಅರ್ಜುನ ರಚನಾ ಅರುಣ್ ಕುಮಾರ್ ಸಾವಿತ್ರಿ ಉಮೇಶ್ ಅಮೋಘ ರಮೇಶ್ ಸುಂದರ್ ಉಪೇಂದ್ರ ಗೌಡ್ರು ದ್ಯಾವಣ್ಣ ಗೌಡ್ರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೇಣುಗೋಪಾಲ್ ಸೇರಿದಂತೆ ಅನೇಕರು ಹಾಜರಿದ್ದರು.