ರಿವರ್ ವ್ಯೂ ಶಾಲೆಯ ಶಿಕ್ಷಕರು ಮತ್ತು ಆಡಳಿತ ವೃಂದದಿಂದ ನಿಶಿತಾಳ ಭೇಟಿ :ಶಾಲೆಯ ವತಿಯಿಂದ ಆರ್ಥಿಕ ನೆರವು

ಚಿಕ್ಕಮಗಳೂರು( ಜಿಲ್ಲೆ )ಮೂಡಿಗೆರೆ (ತಾ ) ಬಣಕಲ್ ಹೋಬಳಿ, ಹಾರ್ಗೋಡು ಗ್ರಾಮದ ಶ್ರೀಧರ ಮತ್ತು ಗೀತಾ ದಂಪತಿಯ ಮಗಳಾದ ನಿಶಿತಾ 9 ತಿಂಗಳ ಹಿಂದೆ ಆಟ ಆಡುವಾಗ ಬಿದ್ದು ಸ್ಪೇನಲ್ ಕಾರ್ಡ್ ಸಮಸ್ಯೆ ಇಂದ ಬಳಲುತಿದ್ದಳು. ಕಡು ಬಡತನದಲ್ಲಿದ್ದ ನಿಶಿತಾಳ ಪೋಷಕರು ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಕೋರಿದ್ದರು. ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ಕೂಡ ದೊರಕಿತ್ತು. ಸಂಘ ಸಂಸ್ಥೆಗಳು ನಮ್ಮೂರ ಬಣಕಲ್ ಗ್ರೂಪ್ ನ ಸದಸ್ಯರು ಕೃಷ್ಣ ಆಸ್ಪತ್ರೆ ಹಾಗೂ ಸಾರ್ವಜನಿಕರ ಸ್ಪಂದನೆಯಿಂದ ಬಾಲಕಿ ನಿದಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

ಇಂದು ಬಣಕಲ್ ರಿವರ್ ವ್ಯೂ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲಾ ಆಡಳಿತ ಮಂಡಳಿಯವರು ನಿಶಿತಾಳನ್ನು ಭೇಟಿ ಮಾಡಿ ಮಾನಸಿಕ ಧೈರ್ಯ ತುಂಬಿ ಶಾಲೆಯ ವತಿಯಿಂದ ಅವಳಿಗೆ ಆರ್ಥಿಕ ನೆರವನ್ನು ನೀಡಿದರು.

ವರದಿ :✍️ಸೂರಿ ಬಣಕಲ್