ದೇವರ ಮನೆಯಲ್ಲಿ ಕಣ್ಮರೆಯಾಗಿದ್ದ ಯುವಕ ಬೆಳಗಿನ ಜಾವಾ ಮನೆಯಲ್ಲಿ ಪತ್ತೆ

ದೇವರ ಮನೆ ಪ್ರವಾಸ ಮುಗಿಸಿ ವಾಪಸ್ ಬರುವಾಗ ನಾಪತ್ತೆಯಾಗಿದ್ದ ಮೂಡಿಗೆರೆ ತಾಲೂಕಿನ ಗುಡ್ಡ ತೋಟ ಬಳಿ ಘಟನೆ ನಡೆದಿತ್ತು.ಬೆಳ್ತಂಗಡಿ ತಾಲೂಕ್ಕಿನ ಕೊಯ್ಯುರು ಗ್ರಾಮದ ನಾಲ್ಕು ಯುವಕರಲ್ಲಿ ಓರ್ವನಾಪತ್ತೆಯಾಗಿದ್ದ ಎಂದು ರಾತ್ರಿಯಿಡಿ ಬಣಕಲ್ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳಿಂದ , ಯುವಕನಿಗಾಗಿ ಹುಡುಕಾಟ ನಡೆಸಿದ್ದರು.

ಘಟನೆ :ಗುಡ್ಡ ತೋಟ ಬಳಿ ಕಾರು ನಿಲ್ಲಿಸಿ ಸಣ್ಣ ಕಾರಣಕ್ಕೆ ಜಗಳವಾಡಿಕೊಂಡಿದ್ದರು. ಇದರಿಂದ ಮುನಿಸಿಕೊಂಡ ಯುವಕ ಕಾರು ಹತ್ತದೆ ನಡೆದುಕೊಂಡು ಬಂದು ಬಣಕಲ್ ನಲ್ಲೆ ರಾತ್ರಿ ತಂಗಿ ಬೆಳಗಿನ ಜಾವಾ ಮನೆಗೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಚಾಲಕನ ವಿರುದ್ದ ಬಣಕಲ್ ಠಾಣೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದೆ.