ಅಕ್ಟೋಬರ್ 1ರಂದು ‘ಒಂದನೇ ತಾರೀಖು, ಒಂದು ಗಂಟೆ, ಒಂದು ಸಾಥ್’ ನಲ್ಲಿ ಸಮಾಪನ- ಜನರ ನೇತೃತ್ವದಲ್ಲಿ “ಶ್ರಮದಾನದಿಂದ ಸ್ವಚ್ಛತೆ” ಗೆ ಪ್ರಧಾನಿ ಕರೆ “ತ್ಯಾಜ್ಯ ಮುಕ್ತ ಭಾರತ” ಘೋಷಣೆಯಡಿ ಸದ್ಯ ದೇಶಾದ್ಯಂತ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ- ಎಸ್ ಎಚ್ ಎಸ್ ) ಅಭಿಯಾನದಡಿ ಸ್ವಚ್ಛತೆಯ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ
ಇಂದು ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಸಿಬ್ಬಂದಿಗಳು ಬೆಳಗ್ಗೆಯಿಂದ ಬಣಕಲ್ ಮುಖ್ಯರಸ್ತೆ. ಚರಂಡಿ ಯಲ್ಲಿರುವ ತ್ಯಾಜ್ಯಗಳನ್ನು ಸ್ವಚ್ಚ ಗೊಳಿಸುವ ಮುಖಾಂತರ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ P.D.O. ಬಿ.ಎನ್. ಕೃಷ್ಣಪ್ಪ ಮಾತನಾಡಿ ಸ್ವಚ್ಛತಾ ಹಿ ಸೇವಾ 2023 ಅಭಿಯಾನವು ಜನಸಾಮಾನ್ಯರಲ್ಲಿ ಸ್ವಯಂಪ್ರೇರಣೆ ಮತ್ತು ಸಮುದಾಯ ಭಾಗವಹಿಸುವಿಕೆಯ ಮನೋಭಾವವನ್ನು ಪುನರುಜ್ಜೀವನಗೊಳಿಸಿದೆ ಎಂಬುದು ಸ್ಪಷ್ಟವಾಗಿದೆ.
ನೈರ್ಮಲ್ಯವನ್ನು ಪ್ರತಿಯೊಬ್ಬರ ದೈನಂದಿನ ಕರ್ತವ್ಯವನ್ನಾಗಿ ಮಾಡುವ ವಾರ್ಷಿಕ ಅಭಿಯಾನದ ಉದ್ದೇಶವನ್ನು ಇದು ಸಾಧಿಸಿ ತೋರಿಸಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ಮಾತನಾಡಿ ಈ ಅಭಿಯಾನವು ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಮಾನ ದೂರದೃಷ್ಟಿಯೊಂದಿಗೆ ಒಗ್ಗೂಡಿದಾಗ ಮತ್ತು ‘ಸ್ವಚ್ಛ ಭಾರತ’ ಮಿಷನ್ನಂತಹ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿದಾಗ ಗಮನಾರ್ಹ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯರು, ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ :✍️ಸೂರಿ ಬಣಕಲ್