ಬಣಕಲ್ :ಇಂದು ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಬಣಕಲ್ ನಲ್ಲಿ ಆಚರಿಸಲಾಯಿತು. ಬಣಕಲ್ ನಗರದ ಶ್ರೀವಿದ್ಯಾಗಣಪತಿ ಸೇವಾ ಸಮಿತಿ ಇವರ ವತಿಯಿಂದ ಗಣಪತಿ ಮೂರ್ತಿಯನ್ನು ಇಂದು ಪ್ರತಿಷ್ಠಾಪಿಸಲಾಯಿತು.
ಗಣಪತಿಯನ್ನು ಮಧ್ಯಾಹ್ನ 12.30ಕ್ಕೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.ಶ್ರೀವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡರು ಮಾತನಾಡಿ, ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ, ಭಾವೈಕ್ಯತೆ ಪ್ರತೀಕವಾಗಿ ಆಚರಿಸಲಾಗುತ್ತಿದೆ.ಗೌರಿ ಗಣೇಶ ಮೂರ್ತಿಗೆ ಪ್ರತಿ ದಿನ ವಿಶೇಷ ಪೂಜೆ ನಡೆಯಲಿದೆ ಬಣಕಲ್ ನ ಶ್ರೀವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯು ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು,. ಅ.20 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಅ23ರಂದು ನಗರದ ಮುಖ್ಯ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಭಕ್ತ ವೃಂದದೊಂದಿಗೆ ಸಂಚರಿಸಿ ನಗರದ ಕೊಳದಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು. ಹಾಗೆಯೇ ಬಣಕಲ್ ಭಾಗದ ಸುಭಾಶ್ ನಗರ, ಇಂದಿರಾ ನಗರ ಸಬ್ಳಿ, ಮತ್ತಿಕಟ್ಟೆ,ಸೇರಿದಂತೆ ವಿವಿಧ ಭಾಗಗಳಲ್ಲೂ ಇಂದೇ ಪ್ರತಿಷ್ಠಾಪನೆ ಮಾಡಲಾಗಿದೆ . ಬಣಕಲ್ ಸೇವಾ ಸಮಿತಿ ಸದಸ್ಯರಾದ ಕಾರ್ಯ ದರ್ಶಿ ಉದಯ್,ಗಂಗಾಧರ್, ಚಂದ್ರೆಗೌಡ,ಸಂದೇಶ್, ಭುವನ್,ಸದಾಶಿವ ಶೆಟ್ಟಿ ದಿನೇಶ್ N.T. ನಾರಾಯಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:✍️ಸೂರಿ ಬಣಕಲ್