ಬಣಕಲ್ :ತಾನಾಯಿತು ತನ್ನ ಮನೆ ಮಕ್ಕಳು ಸಂಸಾರ ಇದೆ ಜಗತ್ತು ಎಂದು ಬದುಕುವ ಜನರ ನಡುವೆ ತಾನು ಬದುಕಿ ಇನ್ನೊಬ್ಬರನ್ನೂ ಬದುಕಿಸಬೇಕು ಎಂಬ ಮನೋಭಾವನೆ ಬರುವುದು ಕೆಲವರಲ್ಲಿ ಮಾತ್ರ. ಅಂತಹ ವ್ಯಕ್ತಿಯ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಬಣಕಲ್ ನ್ಯೂಸ್ ವತಿಯಿಂದ. ಅವರೆ ನಮ್ಮ ಹೆಮ್ಮೆಯ ಕೃಷ್ಣ ಆಸ್ಪತ್ರೆಯ ರೂವಾರಿ ನವೀನ್ ತಳವಾರ.
ನಾಗೇಶ್ ಭಟ್ ಲಲಿತ ದಂಪತಿಯರ ಪುತ್ರ ನವೀನ್. ತಂದೆ ಅರ್ಚಕರಾಗಿ ದೇವಸ್ಥಾನದಲ್ಲಿ ಸೇವೆ.ಅವರ ಇಬ್ಬರು ಮಕ್ಕಳಲ್ಲಿ ನವೀನ್ ಅವರೇ ಮೊದಲನೆಯವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಜಿರೆಯ S.D.M.ನಲ್ಲಿ ಮುಗಿಸಿದ ಅವರು ನಂತರ Msc -ಇಂಡಸ್ಟ್ರಿಯಲ್ ಆಟೋಮೇಷನ್ ಮುಗಿಸಿ ದೆಹಲಿ ಹಾಗೂ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಾರೆ.ಕೆಲವು ವರ್ಷಗಳ ನಂತರ ಅಬುದಾಭಿಯಲ್ಲಿ ಜಪಾನ್ ಮೂಲದ ಕಂಪನಿಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾರೆ. ಭವ್ಯ ಎಂಬ ಯುವತಿಯನ್ನು ಬಾಳಸಂಗಾತಿಯಾಗಿ ವರಿಸುತ್ತಾರೆ.
ವಿದೇಶದಲ್ಲಿ ಪತ್ನಿ ಮಕ್ಕಳೊಂದಿಗೆ ಇರುವ ಅನೇಕ ಅವಕಾಶ ಇದ್ದರೂ ಕಾಲೇಜು ದಿನದಿಂದಲೂ ಊರಿಗೆ ಏನಾದರೂ ಮಾಡಬೇಕು ಎಂಬ ಹಂಬಲ ಸದಾ ಅವರ ಮನಸಿನಲ್ಲಿ ಪ್ರತಿಧ್ವನಿಸುತಿತ್ತು.
ತಂದೆ ತಾಯಿಯರನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಆದ ಕಹಿ ಅನುಭವ ಆಸ್ಪತ್ರೆ ಕಟ್ಟಲು ಸ್ಫೂರ್ತಿಯಾಯಿತು.ಆ ಸಮಯದಲ್ಲಿ ನಮ್ಮ ಊರಲ್ಲಿ 24ಗಂಟೆ ತೆರೆದಿರುವ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂದು ತೀರ್ಮಾನಿಸುತ್ತಾರೆ.
ಜನರಿಗೆ ಒಳ್ಳೆಯದು ಮಾಡಬೇಕು ಎಂದು ನಿರ್ಧಾರ ಮಾಡಿಬಿಟ್ಟಿದ್ದರು.ತಾವಿರುವ ಗ್ರಾಮದಲ್ಲಿ ಜನರಿಗೆ ಸಹಾಯ ಆಗುವ ಹಾಗೆ ಒಂದು ಆಸ್ಪತ್ರೆ ಕಟ್ಟಿಸಬೇಕು ಜನರು ಸಣ್ಣ ಚಿಕಿತ್ಸೆಗೂ ಮೂಡಿಗೆರೆ ಮಂಗಳೂರು ಹೋಗಬೇಕು ಅದನ್ನು ಮನಗೊಂಡ ನವೀನ್ ಜನರಿಗೆ ತನ್ನಿಂದ ಒಂದು ಸಣ್ಣ ಸಹಾಯ ವಾಗಬೇಕು ಬಣಕಲ್ ನಲ್ಲೆ ಜನರಿಗೆ ಎಲ್ಲಾ ಸೌಕರ್ಯ ಸಿಗಬೇಕು ಎಂದು ತೀರ್ಮಾನಿಸಿ Dr ಮುರುಳಿ ಕೃಷ್ಣ ಇರ್ವತ್ರಾಯ ಅವರ ಸಹಬಾಗಿತ್ವದಲ್ಲಿ ಬಣಕಲ್ ನಲ್ಲಿ ಎರಡು ಅಂತಸ್ತಿನ ಆಸ್ಪತ್ರೆ ಕಟ್ಟಿಸುತ್ತಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನವೀನ್ ತಳವಾರ ಅನೇಕ ರೋಗಿಗಳು ದೊಡ್ಡ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸುವ ಮೊದಲೇ ಪ್ರಾಣ ಕಳೆದುಕೊಂಡಿರುವ ಉದಾಹರಣೆ ಇದೆ.ನಮ್ಮ ಭಾಗದಲ್ಲಿ ಎಲ್ಲಾ ತರಹದ ಸ್ಪೆಷಲಿಸ್ಟ್ ವೈದ್ಯರು ಸಿಗುವುದು ಕಷ್ಟ. ಆದರೇ ಅನೇಕ ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಪ್ರಾಥಮಿಕ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದು. ಆಸ್ಪತ್ರೆ ಅಥವಾ ಶಾಲೆಯತಹ ಸಂಸ್ಥೆ ಒಬ್ಬೊಬ್ಬರಿಗೆ ನಡೆಸುವುದು ಕಷ್ಟ ಊರಿನವರ ಸಹಕಾರ ಪ್ರೋತ್ಸಾಹ ಅತ್ಯಗತ್ಯ. ನಮ್ಮ ಎಲ್ಲಾ ಕೆಲಸಗಳ ರೂವಾರಿ Dr ಮುರುಳಿ ಕೃಷ್ಣ ಎಂದರು.
ನವೀನ್ ರಿಗೆ ಜನರ ಮೇಲಿರುವ ಈ ಕಾಳಜಿಗೆ ಒಂದು ಸಲಾಂ ಹೇಳಲೇಬೇಕು ಹಾಗೂ ಅವರ ಧರ್ಮಪತ್ನಿ ಭವ್ಯ ಕೂಡ ಅವರಿಗೆ ಜೊತೆಯಾಗಿ ನಿಂತು ಪ್ರೋತ್ಸಾಹ ನೀಡಿದ್ದಕ್ಕೆ ಬಣಕಲ್ ಜನರು ಇಂದು 24×7ಆಸ್ಪತ್ರೆ ಭಾಗ್ಯ ಕಾಣುವಂತಾಯಿತು ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ :✍️ಸೂರಿ ಬಣಕಲ್