ಬಣಕಲ್: ಈದ್ ಮಿಲಾದ್ ಹಾಗೂ ಗೌರಿ ಹಬ್ಬದ ಹಿನ್ನಲೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಬಣಕಲ್ ನಲ್ಲಿ ಪೊಲೀಸರಿಂದ ಪೊಲೀಸ್ ಪಥಸಂಚಲನ ನಡೆಸಿದರು.
ಬಣಕಲ್ ಪೊಲೀಸ್ ಠಾಣೆಯ ಆವರಣದಿಂದ ಹೊರಟ ಪಥಸಂಚಲನವು ಮುಖ್ಯ ಬೀದಿಯಲ್ಲಿ ಸಾಗಿತು. ಪಿ.ಎಸ್.ಐ. ಜಂಬೂರಾಜ್ ಮಹಾಜನ್ ಸೇರಿದಂತೆ 50ಕ್ಕೂಅಧಿಕ ಪೊಲೀಸರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಪೊಲೀಸ್ ವಾಹನಗಳು ಸಹ ಸಾಥ್ ನೀಡಿದವು.
ಈ ಬಗ್ಗೆ ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡ ಅವರು SP ಅವರ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾನೂನು ಸುವ್ಯವಸ್ಥೆ ಎಲ್ಲಾ ಕಡೆ ಹದಗೆಟ್ಟಿದೆ ಎಂದು ಸಾರ್ವಜನಿಕ ಅಭಿಪ್ರಾಯ ಬಂದ ಹಿನ್ನಲೆ ಮುಂದೆ ಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆ ಅ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಆಗದ ರೀತಿಯಲ್ಲಿ ಸಾರ್ವಜನಿಕ ಅಸ್ತಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು 24ಗಂಟೆಯೂ ಜನರೊಂದಿಗೆ ಇರುತ್ತೇವೆ ಎಂದು ಪೊಲೀಸ್ ಪಥ ಸಂಚಲನದ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡುವ ಯತ್ನ ನಮ್ಮದಾಗಿದೆ ಎಂದರು. ಪೊಲೀಸ್ ಪೆರೇಡ್ ನಿಂದ ಸಾಮಾನ್ಯ ಜನರಲ್ಲಿ ಉತ್ಸಾಹ ಬರುವುದರ ಜೊತೆಗೆ ನಮ್ಮೊಂದಿಗೆ ಪೊಲೀಸರು ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಮೂಲಕ ಶಾಂತಿಯುತ ಹಾಗೂ ನ್ಯಾಯಸಮ್ಮತ ಆಚರಣೆಗೆ ಜನ ಮುಂದಾಗುತ್ತಾರೆ ಎಂದರು
ಈ ಸಂದರ್ಭದಲ್ಲಿ ಬಣಕಲ್ PSI ಜಂಬೂ ರಾಜ್ ಮಹಾಜನ್, ಬಣಕಲ್ PSI ರನ್ನಗೌಡ ಪಾಟೀಲ್, ಮೂಡಿಗೆರೆ PSI ಆದರ್ಶ್, ಮೂಡಿಗೆರೆ PSI ಕಿಶೋರ್, RPI ಸಹದೇವ್ ಭಾಗವಹಿಸಿದ್ದರು.
ವರದಿ :ಸೂರಿ ಬಣಕಲ್