ಬಣಕಲ್ : ಕೆಳೆದ ಎರಡು ದಿನದ ಹಿಂದೆ ಆಶ್ರಿತ್ ಅವರ ಕೋಳಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಣಕಲ್ ನಲ್ಲಿ ನಡೆದಿದೆ.ಫ್ರೆಶ್ ಚಿಕನ್ ಅಂಗಡಿಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಡ್ರಾಯರ್ ಜಾಲಾಡಿ ಸುಮಾರು ಮೂವತ್ತು ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ಅಂಗಡಿ ಮಾಲೀಕ ಆಶ್ರಿತ್ ತಿಳಿಸಿದ್ದಾರೆ. ಯಾರೋ ಗೊತ್ತಿದ್ದವರೇ ಕೃತ್ಯ ನಡೆಸಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ವೇಳೆ ಈ ಕೃತ್ಯ ನಡೆದಿದ್ದು ಗುರುವಾರ ಬೆಳಗ್ಗೆ ಅಂಗಡಿ ತೆರೆಯಲು ಬಂದು ನೋಡಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಅದೇ ದಿನ ಬಣಕಲ್ ಲಕ್ಷ್ಮಣ್ ಗೌಡ ಎಂಬುವವರ ಮನೆಯ ಮೇಲಿದ್ದ ಕೇಬಲ್ ವೈರ್ ಗಳನ್ನು ಕಳ್ಳರು ತುಂಡರಿಸಿ ಹೋಗಿದ್ದಾರೆ.ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
