ಬಣಕಲ್: ಮತ್ತಿಕಟ್ಟೆ ಹೋಗುವ ರಸ್ತೆಗೆ ಬಾಗಿ ಅಪಾಯವನ್ನು ಅಹ್ವಾನಿಸುವಂತಿದ್ದ ಮರದ ರೆಂಬೆಗಳನ್ನು ಮೂವರು ಯುವಕರೇ ಸೇರಿ ರೆಂಬೆ ಕೊಂಬೆಗಳನ್ನು ತೆರವುಗೊಳಿಸಿದ ಕಾರ್ಯ ಮತ್ತಿಕಟ್ಟೆಗೆ ಹೋಗುವ ಮಾರ್ಗದಲ್ಲಿ ಮಾಡಿದರು .ಮರದ ಉದ್ದನೆಯ ರೆಂಬೆಗಳು ರಸ್ತೆಯತ್ತ ಚಾಚಿಕೊಂಡು ಯಾವುದೇ ಕ್ಷಣದಲ್ಲಿ ಗಾಳಿ ಮಳೆಗೆ ಮುರಿದು ಬೀಳುವಂತಿತ್ತು ಮರದ ಕೆಳಗೆ ವಿದ್ಯುತ್ ಲೈನ್ ಕೂಡ ಹಾದುಹೋಗಿತ್ತು ದಿನ ನಿತ್ಯ ಶಾಲಾ ವಾಹನಗಳು. ಮತ್ತಿಕಟ್ಟೆ ಬಸ್. ಆಟೋಗಳು ಈ ರಸ್ತೆ ಮೂಲಕ ದಿನ ನಿತ್ಯ ಹಾದು ಹೋಗುತ್ತವೆ.ಯಾರೂ ಕೂಡ ಇದುವರೆಗೂ ಅದರ ಬಗ್ಗೆ ಗಮನ ಹರಿಸದೆ ಇರುವುದನ್ನು ಮನಗೊಂಡು ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಮತ್ತಿಕಟ್ಟೆಯ ಯುವಕರೇ ಸೇರಿ ಮರ ಹಾಗೂ ರೆಂಬೆಗಳನ್ನು ತೆರವುಗೊಳಿಸುವುದರ ಮೂಲಕ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.ರಸ್ತೆಗಳ ಮೇಲೆ ಬೀಳಬಹುದಾದ ರೆಂಬೆ-ಕೊಂಬೆ, ಮರದಿಂದಾಗಿ , ಪ್ರಾಣಾಪಾಯ ತಂದೊಡ್ಡುವ ಸಂಚಾರಕ್ಕೆ ಧಕ್ಕೆಯಾಗುವ ಆತಂಕ ಅರಿತ ಯುವಕರಾದ ಹರೀಶ್. ದಾಮು. ಭರತ್ ಎಂಬುವವರು ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ಮಾದರಿಯಾದರು.*ವರದಿ:ಸೂರಿ ಬಣಕಲ್*
