ಬಣಕಲ್ :ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲೆಡೆ ಪ್ರಖ್ಯಾತಿ. ಕರಾವಳಿಯ ಕಾರಣಿಕ ದೈವಸ್ಥಾನದ ಮುಂದೆ ಖದೀಮ ಕಳ್ಳರು ಬೆದರಿ ಬೆಂಡಾಗುತ್ತಾರೆ. ದೈವಕ್ಕೆ ಕೇಡು ಬಗೆಯುವ ಹುಚ್ಚು ಸಾಹಸಕ್ಕೆ ಮುಂದಾಗೋದಿಲ್ಲ. ಅಂತದ್ದಾಗಿಯೂ ಏನಾದ್ರೂ ಕೇಡು ಬಗೆದಲ್ಲಿ ದೈವ ಶಕ್ತಿಗಳು ಆತನನ್ನು ಮಟ್ಟ ಹಾಕುತ್ತೆ ಅನ್ನೋದು ಸಾಬೀತಾಗಿದೆ .ಇದೀಗ ಬಣಕಲ್ ನಲ್ಲಿ ಗುಳಿಗ ದೈವ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಬಣಕಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ ಘಟನೆ ನಡೆದು ಕೆಲವೇ ಗಂಟೆಯಲ್ಲಿ ಕಳ್ಳನ ಪತ್ತೆಯಾಗಿರುವುದು ದೈವಶಕ್ತಿಗೆ ಸಾಕ್ಷಿ. ಘಟನೆ ನಡೆದಾಗ ಸ್ಥಳದಲ್ಲಿದ್ದ ಮಹಾಮ್ಮಾಯಿ ಯುವಕಸಂಘದ ಸದಸ್ಯ ಅರುಣ್ ಪೂಜಾರಿ ಅವರು ಗುಳಿಗ ದೈವದ ಬಳಿ ಕೈ ಮುಗಿದು ಕಳ್ಳತನ ಮಾಡಿದವನಿಗೆ ದೈವ ಶಕ್ತಿ ಏನೆಂದು ತೋರಿಸಬೇಕು ಎಂದು ಬೇಡಿಕೊಂಡಿದ್ದರು.ಅದನ್ನು ಸ್ನೇಹಿತರಲ್ಲೂ ಹೇಳಿಕೊಂಡಿದ್ದರು ದೈವ ಶಕ್ತಿ ಏನೆಂದು ಕೆಲವೇ ದಿನಗಳಲ್ಲಿ ನೋಡುತ್ತೇವೆ ಎಂದು.ಕಾಕತಾಳಿಯ ಎಂಬಂತೆ ದೈವದ ಬಳಿ ಬೇಡಿಕೊಂಡ ವ್ಯಕ್ತಿಯ ಕೈಗೆ ರಾತ್ರಿ ಕಳ್ಳ ಸಿಕ್ಕಿರುವುದು ನಿಜಕ್ಕೂ ದೈವದ ಪವಾಡ ಎನ್ನದೆ ಮತ್ತೇನು. ರಾತ್ರಿ 9:30ರ ಸುಮಾರಿಗೆ ಎಂದಿನಂತೆ ಮನೆಗೆ ಹೋಗುತ್ತಿದ್ದಾಗ ಸುಭಾಷ್ ನಗರ ಸಮೀಪ ಅಪರಿಚಿತ ವ್ಯಕ್ತಿ ನಡೆದುಕೊಂಡು ಹೋಗುವುದನ್ನು ಗಮನಿಸಿ ಅನುಮಾನಗೊಂಡು ವಿಚಾರಿಸುತ್ತಾರೆ ಹಾಗೆ ಮಾತನಾಡುತ್ತ ಆ ವ್ಯಕ್ತಿಗೆ ಅನುಮಾನ ಬರದಂತೆ ಫೋಟೋ ತೆಗೆದು ಈ ವ್ಯಕ್ತಿಯೇ ಎಂದು ತಿಳಿಯಲು ಪ್ರತ್ಯಕ್ಷದರ್ಶಿ ಮಧುರವರಿಗೆ ಕಳುಹಿಸುತ್ತಾರೆ.ತಕ್ಷಣಕ್ಕೆ ಅವರು ಕಳವು ಮಾಡಿದ ವ್ಯಕ್ತಿ ಇವನೇ ಎಂದು ಪತ್ತೆ ಹಚ್ಚುತ್ತಾರೆ.ನಂತರ ಅವನನ್ನು ಹಿಡಿದು ಬಣಕಲ್ ಪೊಲೀಸರಿಗೆ ಒಪ್ಪಿಸುತ್ತಾರೆ.ಇದು ನಿಜಕ್ಕೂ ದೈವದ ಪವಾಡ ಎಂದು ಅರುಣ್ ರವರು ಸಂತೋಷ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಣಕಲ್ ನಲ್ಲಿ ಮತ್ತೊಮ್ಮೆ ಗುಳಿಗ ದೈವದ ಪವಾಡ ಘಟಿಸಿರುವುದು ಭಕ್ತರಲ್ಲಿ ಸಂತಸ ಮೂಡಿದೆ.*ವರದಿ:ಸೂರಿ ಬಣಕಲ್*
