ಅದ್ದೂರಿ ಶೋಭಯಾತ್ರೆಗೆ ಸಾಕ್ಷಿಯಾದ ಬಣಕಲ್

ಬಣಕಲ್ :ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳ ನೇತೃತ್ವದಲ್ಲಿ ಇಂದು ಬಣಕಲ್ ನಲ್ಲಿ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ನೂರಾರು ಅಧಿಕ ದತ್ತ ಮಾಲಾಧಾರಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ದತ್ತಾತ್ರೇಯನ ಜಪ ಮಾಡುತ್ತಾ ಜೈಕಾರ ಕೂಗಿ ಹೆಜ್ಜೆ ಹಾಕಿದರು.
ನಗರದ ಮಹಮ್ಮಾಯಿ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆ ಬಣಕಲ್ ಮುಖ್ಯ ರಸ್ತೆಯ ಮೂಲಕ ಸಾಗಿ ಬಣಕಲ್ ಸಮುದಾಯ ಭವನದಲ್ಲಿ ಕೊನೆಗೊಂಡಿತು. ಶೋಭ ಯಾತ್ರೆ ಸಾಗುವ ರಸ್ತೆ ಉದ್ದಕ್ಕೂ ಕೇಸರಿ ಬಣ್ಣದ ಬಾವುಟಗಳು ರಾರಾಜಿಸುತ್ತಿದ್ದವು. ದತ್ತಾಮಾಲಧಾರಿಗಳು ದತ್ತರಿಗೆ ಜೈಕಾರ ಕೂಗೂತ್ತಾ ಸಾಗಿದರು
ಶೋಭಯಾತ್ರೆಯಲ್ಲಿ ಭಜನಾ ನೃತ್ಯ ತಂಡದವರಿಂದ ರಸ್ತೆಯುದ್ದಕ್ಕೂ ನೃತ್ಯ ಪ್ರದರ್ಶನ ಗಮನ ಸೆಳೆಯಿತು . ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಯಾತ್ರೆಯಲ್ಲಿ ಯುವಕರು ಜೈಶ್ರೀರಾಮ್, ಜೈಭಜರಂಗಿ ಹಾಡಿಗೆ ಹೆಜ್ಜೆ ಹಾಕಿದರು. ಶೋಭಾಯಾತ್ರೆಗೆ ಮೂಡಿಗೆರೆ ತಾಲ್ಲೂಕ್ಕಿನ ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದರು.
ನಗರ ಕೇಸರಿ ಮಯವಾಗಿತ್ತು. ಯಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.ವೇದಿಕೆಯಲ್ಲಿ ಯುವ ವಾಗ್ಮಿ ಕುಮಾರಿ ಚೈತ್ರ ಕುಂದಾಪುರ ದಿಕ್ಸೂಚಿ ಭಾಷಣಕಾರರಾಗಿ ಗಮನ ಸೆಳೆದರು..ಶೋಭಾಯಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗಂತೆ ಪೊಲೀಸ್​ ಬಂದೋಬಸ್ತ್ ಮಾಡಲಾಗಿತ್ತು.