ಬಣಕಲ್ :ಇತ್ತೀಚಿಗೆ ಮೂಡಿಗೆರೆ ತಾಲೂಕ್ಕಿನ ಬಣಕಲ್ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಇಂದು ಮಾಜಿ ಸಚಿವೆ ಮೋಟಮ್ಮ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ದಿನಸಿ ಕಿಟ್ ಗಳನ್ನು ವಿತರಿಸಿದರು..ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಳುದುಕೊಂಡ ಕುಟುಂಬ ಹಾಗೂ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಕಳೆದುಕೊಂಡ ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಮೋಟಮ್ಮ ರಾಜ್ಯ ಸರ್ಕಾರದ ಮಳೆ ಹಾನಿ ನಿರ್ವಹಣೆ ಕ್ರಮಗಳ ಕುರಿತು ಕಿಡಿ ಕಾರಿದ್ದು, ‘‘ರಾಜ್ಯದಲ್ಲಿ ಮಳೆ ಹಾನಿಯಿಂದ ಜನರು ತತ್ತರಿಸುತ್ತಿದ್ದಾರೆ ಬಸವರಾಜ ಬೊಮ್ಮಾಯಿ ಅವರು ಸಹ ಆನ್ಲೈನ್ ಸಭೆಗಳಿಗೆ ಸೀಮಿತರಾಗಿದ್ದಾರೆ. ಹೀಗಾದರೆ ಜನರ ಕಷ್ಟಕೇಳುವವರಾರು?’ ಆದಷ್ಟು ಬೇಗ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು.
ಮಳೆ ಅವಾಂತರದಿಂದ ಭೂಕುಸಿತ, ಪ್ರವಾಹದಂತಹ ಅವಘಡಗಳು ಸಂಭವಿಸುತ್ತ ವಾರ ಕಳೆದಿದೆ. ಸರ್ಕಾರ ಇದುವರೆಗೂ ಪ್ಯಾಕೇಜ್ ಘೋಷಿಸಲಿಲ್ಲ, ಸಮರ್ಪಕ ಪರಿಹಾರ ಘೋಷಣೆ ಮಾಡಲಿಲ್ಲ ಮೀಟಿಂಗ್, ನೆಪ ಮಾತ್ರದ ವಿಸಿಟಿಂಗ್, ಇಷ್ಟೇ ಸರ್ಕಾರದ ನೆರವಿನ ಕಾರ್ಯಕ್ರಮಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಉಪಾಧ್ಯಕ್ಷರಾದ ಇರ್ಫಾನ್, ಹೋಬಳಿ ಕಾರ್ಯದರ್ಶಿ ಉಮ್ಮರ್,ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಭಿನ್ನಡಿ ಪ್ರಭಾಕರ್, ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲ್ದಾರ್ ಬೇಗಂ ಉಪಸ್ಥಿತರಿದ್ದರು
