ಬಣಕಲ್ :ಜೆಸಿಐ ವಿಸ್ಮಯ ಬಣಕಲ್ ಇವರ ವತಿಯಿಂದ 23ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಬಣಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಭಾರತ ಮಾತೆಯ ಸುಪುತ್ರ, ಹೆಮ್ಮೆಯ ಯೋಧ ಬೆಟ್ಟಗೆರೆ ಕೆ. ಎಸ್. ಚನ್ನಕೇಶವ (ಸುರೇಂದ್ರ) ಅವರಿಗೆ ಗೌರವ ಸಮರ್ಪಣೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶರತ್ ಗೌಡ ಫಲ್ಗುಣಿ, ಲೇಡಿ ಜೇಸಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶರತ್, ಕಾರ್ಯದರ್ಶಿ ಪ್ರಮೋದ್ ಪಿ ಎಂ, ಉಪಾಧ್ಯಕ್ಷರಾದ ಮಧುರ ಕವೀಶ್ ಮತ್ತು ರವಿ ಕೆ ಎಲ್, ಪೂರ್ವ ಅಧ್ಯಕ್ಷರುಗಳಾದ ಸುರೇಶ್ ಶೆಟ್ಟಿ, ಗಜೇಂದ್ರ ಟಿ ಎಂ, ಹರ್ಷವರ್ಧನ್, ದಿನೇಶ್ ಎನ್ ಟಿ, ರವಿಶಂಕರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರೇಮ್ ಸಾಗರ್ ಹಾಗೂ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
