ಮೂಡಿಗೆರೆ: ಮಲೆನಾಡಲ್ಲಿ ಸುರಿಯುತ್ತಿರುವ ಮಹಾಮಳೆ ನೂರಾರು ಜನರನ್ನ ಬೀದಿಗೆ ಬೀಳಿಸುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಬದುಕು ಶೋಚನೀಯವಾಗಿದೆ. ಮಳೆಗೆ ಮನೆ ಕಳೆದುಕೊಂಡು ಸಂಬಂದಿಕರ ಮನೆಯಲ್ಲಿ ಬದುಕು ಸಾಗಿಸುತ್ತಿರೋ ಮೂಡಿಗೆರೆಯ ಬಡ ಕುಟುಂಬದ ಕಥೆ ಕಣ್ಣೀರು ತರಿಸುವಂತಿದೆ.
ಜಿಲ್ಲೆಯ ಜನರ ಜೀವನವೇ ಬುಡಮೇಲು ಆಗಿದೆ. ಅದ್ರಲ್ಲೂ ಗ್ರಾಮೀಣ ಭಾಗದ ಲ್ಲಿ ವಾಸವಾಗಿರೋ ಬಡ ಜನ್ರ ಬದುಕು ದುಸ್ಥರವಾಗಿದೆ. ಹುಟ್ಟಿ, ಬೆಳೆದು ಬಾಳಿ ಬದುಕಿದ ಮನೆಗಳು ಕಣ್ಮುಂದೆಯೇ ಕುಸಿದು ಬಿಳುತ್ತಿವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳ ಬದುಕು ಬೀದಿಗೆ ಬಂದಿವೆ ಅವರು ಬಾಳಿ ಬದುಕಿದ ಮನೆಗಳ ಸ್ಥಿತಿ ನೋಡಿ ಬಡ ಕುಟುಂಬಗಳು ಕಣ್ಣೀರು ಹಾಕ್ತಾಯಿವೆ..
ಜಿಲ್ಲೆಯ ಮೂಡಿಗೆರೆ ತಾಲೂಕ್ಕಿನಲ್ಲಿ ನಿರಂತವಾಗಿ ಸುರಿಯುತ್ತಿರೋ ರಣಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂದೂರು ಗ್ರಾಮದ ಹುಲ್ಲೆಮನೆ ವಾಸಿಯಾದ ಶ್ರೀಮತಿ ಕಮಲಾಕ್ಷಿ ಹಾಗೂ ಮಂಜುನಾಥ್ ದಂಪತಿಯರ ಮನೆ ಮಹಾ ಮಳೆಗೆ ಸಂಪೂರ್ಣ ನೆಲಸಮ ವಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣಪಯವಾಗಿಲ್ಲ ಇದ್ದ ಒಂದು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಒಂದು ಕಡೆ ಕಿತ್ತು ತಿನ್ನುವ ಬಡತನ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕಮಲಾಕ್ಷಿ ಕುಟುಂಬಕ್ಕೆ ಈಗ ಮನೆ ಕಳೆದುಕೊಂಡು ದಿಕ್ಕೇತೋಚದಂತಾಗಿದೆ.ಸರ್ ನಿಮ್ಮ ಕೈ ಮುಗಿತೀನಿ ನಮಗೊಂದು ಸೂರು ಕೊಡಿಸಿ ಅಂತ ಕಮಲಾಕ್ಷಿ ಕೇಳಿ ಕೊಳ್ಳುತ್ತಿದ್ದಾರೆ . ಮನೆಇಲ್ಲದೆ ಅಕ್ಕ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ಮನೆ ಇಲ್ಲದ ನಮಗೆ ಯಾರು ದಿಕ್ಕು ಅಕ್ಕ ಪಕ್ಕದ ಮನೆಯಲ್ಲಿ ಅಡುಗೆ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ ಅಧಿಕಾರಿಗಳು ಜನಪ್ರತಿನಿದಿಗಳು ನೆಲೆ ಇಲ್ಲದ ನಮಗೆ ನೆಲೆ ಕಲ್ಪಿಸಬೇಕೆಂದು ಬೇಡಿಕೊಂಡಿದ್ದಾರೆ.