ಬಣಕಲ್ : ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಮಾಡಲು ದೊಡ್ಡ ಕೆಲಸನೇ ಆಗಬೇಕೆಂದಿಲ್ಲ ಸಣ್ಣ ಕೆಲಸ ಆದರೂ ಸರಿ ಕೆಲಸಗಳನ್ನು ಶ್ರದ್ದೆಯಿಂದ ಮಾಡಿದರೆ ಸಾಕು ಜನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಬಣಕಲ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಕೆಎಂ ರಸ್ತೆ ಹೆದ್ದಾರಿ ಕಾಮಗಾರಿ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗೆ ಕಾರಣವಾಗಿದೆ.. ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎರಡು ಕಡೆ ಚರಂಡಿ ನಿರ್ಮಿಸಿದ್ದಾರೆ ಆದರೆ ಮಳೆ ಬಂದರೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದಾಗ ಮೆಲ್ಬಾಗದಿಂದ ಬರುವ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿವೆ ಇದರಿಂದ ಅಕ್ಕಪಕ್ಕದಲ್ಲಿ ಇರುವ ಹೋಟೆಲ್ ಅಂಗಡಿ ಮಾಲೀಕರು ಹಿಡಿಶಾಪ ಹಾಕುತಿದ್ದರು ಕಳೆದ ವರ್ಷ ಕೂಡ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಮಳೆಯಿಂದ ತುಂಬಾ ತೊಂದರೆ ಅನುಭವಿಸಿದ್ದರು ಇದರಿಂದ ರೋಸಿ ಹೋಗಿದ್ದರು ಅಂಗಡಿ ಮಾಲೀಕರು ತಮಗೆ ಆಗುತ್ತಿರುವ ಸಮಸ್ಯೆಯನ್ನು ನೂತನ ಗ್ರಾಮ ಪಂಚಾಯಿತಿ ಸದಸ್ಯ ಕೆ ಎಂ ಮಧುಕುಮಾರ್ ರವರ ಗಮನಕ್ಕೆ ತಂದಿದ್ದಾರೆ ತಕ್ಷಣಕ್ಕೆ ಸ್ಪಂದಿಸಿದ ಅವರು ತನ್ನ ಸ್ವಂತ ಖರ್ಚಿನಿಂದ ತಾವೇ ನಿಂತು ತಾತ್ಕಾಲಿಕವಾಗಿ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಪರಿಹರಿಸಿದ್ದಾರೆ. ವರ್ಷಗಳಿಂದ ತೊದರೆ ಅನುಭವಿಸಿದ್ದ ವರ್ತಕರು ಗ್ರಾಮ ಪಂಚಾಯಿತಿ ಸದಸ್ಯನ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ.
