ಬಣಕಲ್ :ಸಂಜೀವಿನಿ ಮಾಸಿಕ ಸಂತೆ ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎನ್.ಆರ್.ಎಲ್.ಎಂ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ್ ಬಣಕಲ್ ನಲ್ಲಿ ಪಂಚಾಯಿತಿ ಒಕ್ಕೂಟದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಚೆಂದ್ರಕಲಾ ಧನರಾಜ ಅವರು ಉದ್ಘಾಟಿಸಿದರು.
ಸದರಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ..ಮಾತನಾಡಿ ,ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಸ್ವ-ಸಹಾಯ ಸಂಘದ ಮಹಿಳೆಯರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ಮಹಿಳೆಯರ ಜೀವನ ಬದಲಾವಣೆಗೆ ಸಂಜೀವಿನಿ – ಎನ್.ಆರ್.ಎಲ್.ಎಂ ಯೋಜನೆ ಹಾಗೂ ಉದ್ಯೋಗ ಖಾತರಿ ಬಹಳ ಸಹಕಾರಿಯಾಗಲಿದೆ, ಈ ಮಾಸಿಕ ಸಂತೆ ಸ್ತ್ರೀ ಸಬಲೀಕರಣಕ್ಕೆ ದಾರಿ ಎಂದು ತಿಳಿಸಿದರು.
ಬಣಕಲ್ ಗ್ರಾಮದಲ್ಲಿ ಮಾಸಿಕ ಸಂತೆ ಆಯೋಜನೆ ಮಾಡಿದ್ದರಿಂದ ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿರುವ ವಸ್ತುಗಳನ್ನು ಮಾರಾಟ ಕೇಂದ್ರಗಳಿಗೆ ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು, ಈ ಸಂತೆಯಲ್ಲಿ ಒಟ್ಟು 12ಸಂಘದ ಸದಸ್ಯರು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯರು. ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ ಎಚ್ ಎಸ್. ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು..
