ಬಣಕಲ್ :ಮಂಗಳ ಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ ಆದರೆ ಇಂದು ಓರ್ವ ಮಂಗಳಮುಖಿ ಬಣಕಲ್ ನಲ್ಲಿ ವರ್ತಕರಿಗೆ ತೊಂದರೆ ಉಂಟುಮಾಡಿದ ಘಟನೆ ನಡೆದಿದೆ. ಇಂದು ಬಣಕಲ್ ನಲ್ಲಿ ಅಂಗಡಿಗಳಿಗೆ ಓರ್ವ ಮಂಗಳಮುಖಿ ಭಿಕ್ಷಾಟನೆಗೆ ಆಗಮಿಸಿದ್ದಳು ಅವರಿಗೆ ಮಾನವೀಯ ನೆಲೆಯಿಂದ ಅಂಗಡಿ ಮಾಲೀಕರು ಕೊಟ್ಟ ಹಣವು ಅವರ ನಿರೀಕ್ಷೆ ಮಟ್ಟದಲ್ಲಿ ಇಲ್ಲವೆಂದು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾಳೆ ಅವರ ಬೇಡಿಕೆಯ ಮೊತ್ತ ಸಿಗದಿದ್ದಕ್ಕೆ ಕೋಪಗೊಂಡು ಕೊಟ್ಟ ಹಣವನ್ನು ಸ್ವೀಕರಿಸದೆ ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿರುತ್ತಾಳೆ ಅಂಗಡಿ ಮುಂದೆ ಅಸಭ್ಯವಾಗಿ ವರ್ತಿಸಿದ್ದಾಳೆ ಇದರಿಂದ ಆಕ್ರೋಶಗೊಂಡ ಬಣಕಲ್ ಯುವಕರು ಅವಳನ್ನು ಹಿಡಿದು ಅವಳಿಗೆ ಸರಿಯಾಗೇ ಜಾಡಿಸಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಅವಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ
