ಬಣಕಲ್ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಎ,ಆರ್, ಅಭಿಲಾಷ್ ಆಯ್ಕೆ


ಬಣಕಲ್ :ಇಲ್ಲಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಭಿಲಾಷ್ ಬಿ. ಆರ್. ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಬಿ, ಎಂ, ಭರತ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಸಂಘದ ಕಚೇರಿಯಲ್ಲಿ ಚುನಾವಣೆಯಲ್ಲಿ ಅಭಿಲಾಷ್ ಬಿ,ಆರ್, ಅವಿರೋದವಾಗಿ ಆಯ್ಕೆ ಆದರು .
‘ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ಸಹಕಾರಿ ಕ್ಷೇತ್ರ ಉತ್ತಮ ಕ್ಷೇತ್ರವಾಗಿದೆ ಆ ನಿಟ್ಟಿನಲ್ಲಿ ನನಗೆ ಸಿಕ್ಕಿರುವ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಸೇವೆ ಸಲ್ಲಿಸುತ್ತೇನೆ’ ಎಂದು ಅಭಿಲಾಷ್ ತಿಳಿಸಿದರು.
ಸಂಘದ ಉಪಾಧ್ಯಕ್ಷ ,ರಮೇಶ್ ನಿರ್ದೇಶಕರುಗಳಾದ ಬಿ ಎಂ ಭರತ್ ರಂಗನಾಥ್ ಗಜೇಂದ್ರ ಕಲ್ಲೇಶ್ ಶಾಮಣ್ಣ ವಿಕ್ರಂ ಶೇಖರ್ ದಿಲ್ದಾರ್ ಬೇಗಂ ಪ್ರದೀಪ್ ಭಿನ್ನಡಿ ಮಮತಾ ನಾರಾಯಣ ಗೌಡ ಲಕ್ಷ್ಮಿ ಚುನಾವಣಾ ಅಧಿಕಾರಿಗಳು ಇದ್ದರು.